ADVERTISEMENT

ಸಾರಿಗೆ ನೌಕರರ ಮುಷ್ಕರ: ಬಿಕೋ ಎನ್ನುತ್ತಿದೆ ಬಸ್ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 5:21 IST
Last Updated 12 ಡಿಸೆಂಬರ್ 2020, 5:21 IST
   

ರಾಯಚೂರು: ಪ್ರತಿನಿತ್ಯ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುತ್ತಿದ್ದ ನಗರದ ಕೇಂದ್ರ‌ ಬಸ್ ನಿಲ್ದಾಣವು ಲಾಕ್‌ಡೌನ್‌ ದಿನಗಳನ್ನು ನೆನಪಿಸುತ್ತಿದ್ದು ಬಿಕೋ ಎನ್ನುತ್ತಿದೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರು ಆರಂಭಿಸಿರುವ ಸಂಚಾರ ಸೇವೆ ಸ್ಥಗಿತವು ಎರಡನೇ ಶನಿವಾರವೂ ಮುಂದುವರಿದಿದೆ. ಸಂಚಾರ ಸ್ಥಗಿತ ಮಾಹಿತಿ ವ್ಯಾಪಕವಾಗಿದ್ದರಿಂದ ಪ್ರಯಾಣಿಕರು ಬಸ್ ನಿಲ್ದಾಣದತ್ತ ಬಂದಿಲ್ಲ. ಆದರೆ ಖಾಸಗಿ ವಾಹನಗಳಿಗೆ ಒಳ್ಳೆಯ ಅವಕಾಶ ನಿರ್ಮಾಣವಾಗಿದ್ದು, ಪ್ರಯಾಣ ದರದ ಬಗ್ಗೆ ಚೌಕಾಸಿ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT