ADVERTISEMENT

ಬೆಂಗಳೂರು-ಮೈಸೂರು ಹೆದ್ದಾರಿ, ಬೈಪಾಸ್‌ಗಳು ಇಂದು ಭಾಗಶಃ ಬಂದ್: ಯಾಕೆ ಗೊತ್ತೇ?

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2022, 11:53 IST
Last Updated 31 ಡಿಸೆಂಬರ್ 2022, 11:53 IST
   

ರಾಮನಗರ: ಹೊಸ ವರ್ಷಾಚರಣೆ ಹಾಗೂ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯ ಬೈಪಾಸ್ ಗಳಲ್ಲಿ ವಾಹನಗಳ ಓಡಾಟಕ್ಕೆ ಶನಿವಾರಸಂಜೆ ನಿರ್ಬಂಧ ಇರಲಿದೆ.

ಬಿಡದಿ ಹಾಗೂ ರಾಮನಗರ- ಚನ್ನಪಟ್ಟಣ ಬೈಪಾಸ್ ಗಳಲ್ಲಿ ಶನಿವಾರ ಸಂಜೆ 5.30ರಿಂದ ಭಾನುವಾರ ಬೆಳಿಗ್ಗೆ 4.30ರವರೆಗೆ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ. ಅಂತೆಯೇ ಕುಂಬಳಗೋಡು ಫ್ಲೈ ಓವರ್ ಶನಿವಾರ ರಾತ್ರಿ 8ರಿಂದ ಭಾನುವಾರ ಬೆಳಿಗ್ಗೆ 4.30ರವರೆಗೆ ಬಂದ್ ಆಗಿರಲಿದೆ ಎಂದು ರಾಮನಗರ ಎಸ್ಪಿ ಸಂತೋಷ್ ಬಾಬು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT