ADVERTISEMENT

ಬಿಡದಿ, ಚನ್ನಪಟ್ಟಣಕ್ಕೆ ಲಗ್ಗೆ ಇಟ್ಟ ಆನೆಗಳು

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 5:44 IST
Last Updated 18 ಜುಲೈ 2021, 5:44 IST
ಬಿಡದಿಯ ಬಾಲಾಜಿ‌ ಲೇಔಟ್‌ನಲ್ಲಿ ಕಾಣಿಸಿಕೊಂಡ ಆನೆಗಳು
ಬಿಡದಿಯ ಬಾಲಾಜಿ‌ ಲೇಔಟ್‌ನಲ್ಲಿ ಕಾಣಿಸಿಕೊಂಡ ಆನೆಗಳು   

ರಾಮನಗರ: ಬಿಡದಿಯ ಬಾಲಾಜಿ‌ ಲೇಔಟ್‌ನಲ್ಲಿ ಭಾನುವಾರ ಮುಂಜಾನೆ ಆನೆಗಳು ಕಾಣಿಸಿಕೊಂಡಿವೆ.

ರೈಲು ನಿಲ್ದಾಣದ ಹಿಂಭಾಗ ಇರುವ ಬಡಾವಣೆಯಲ್ಲಿ ಎರಡು ಆನೆಗಳು ಓಡಾಡುತ್ತಿವೆ. ಅದರಲ್ಲಿ ಒಂದು ಆನೆಗೆ ಗಾಯವಾಗಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸರು ಆನೆಯನ್ನು ಕಾಡಿಗೆ ಕಳುಹಿಸುವ ಕಾರ್ಯಾಚರಣೆ ನಡೆಸಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ಎನ್.ಆರ್. ಕಾಲೊನಿ ಸುತ್ತಲಿನ ಜಮೀನಿನಲ್ಲಿ ಭಾನುವಾರ ಆನೆಗಳ ಹಿಂಡು‌‌ ಪ್ರತ್ಯಕ್ಷ ಆಗಿದೆ.‌ ಹೊಲದಲ್ಲಿನ ಬೆಳೆಗಳನ್ನು‌ ಮೇಯುತ್ತ ಗಜಪಡೆ ಅತ್ತಿಂದಿತ್ತ ಸಂಚಾರ ನಡೆಸಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.