ರಾಮನಗರ: ಬಿಡದಿಯ ಬಾಲಾಜಿ ಲೇಔಟ್ನಲ್ಲಿ ಭಾನುವಾರ ಮುಂಜಾನೆ ಆನೆಗಳು ಕಾಣಿಸಿಕೊಂಡಿವೆ.
ರೈಲು ನಿಲ್ದಾಣದ ಹಿಂಭಾಗ ಇರುವ ಬಡಾವಣೆಯಲ್ಲಿ ಎರಡು ಆನೆಗಳು ಓಡಾಡುತ್ತಿವೆ. ಅದರಲ್ಲಿ ಒಂದು ಆನೆಗೆ ಗಾಯವಾಗಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸರು ಆನೆಯನ್ನು ಕಾಡಿಗೆ ಕಳುಹಿಸುವ ಕಾರ್ಯಾಚರಣೆ ನಡೆಸಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಎನ್.ಆರ್. ಕಾಲೊನಿ ಸುತ್ತಲಿನ ಜಮೀನಿನಲ್ಲಿ ಭಾನುವಾರ ಆನೆಗಳ ಹಿಂಡು ಪ್ರತ್ಯಕ್ಷ ಆಗಿದೆ. ಹೊಲದಲ್ಲಿನ ಬೆಳೆಗಳನ್ನು ಮೇಯುತ್ತ ಗಜಪಡೆ ಅತ್ತಿಂದಿತ್ತ ಸಂಚಾರ ನಡೆಸಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.