ADVERTISEMENT

ಬೆಂಗಳೂರು–ಮೈಸೂರು ಹೆದ್ದಾರಿ ಬದಿ ಕಾಡಿಗೆ ಬೆಂಕಿ

ಮದ್ದೂರು, ಚನ್ನಪಟ್ಟಣ ಭಾಗದ ಅರಣ್ಯ ಭಾಗದಲ್ಲಿ ಘಟನೆ; ಬಾನೆತ್ತರಕ್ಕೆ ಆವರಿಸಿದ ಹೊಗೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 19:00 IST
Last Updated 18 ಜನವರಿ 2026, 19:00 IST
<div class="paragraphs"><p>ಅಬ್ಬೂರು ಗುಡ್ಡೆಯಲ್ಲಿ ಕಾಣಿಸಿಕೊಂಡಿರುವ ಬೆಂಕಿ</p></div>

ಅಬ್ಬೂರು ಗುಡ್ಡೆಯಲ್ಲಿ ಕಾಣಿಸಿಕೊಂಡಿರುವ ಬೆಂಕಿ

   

ರಾಮನಗರ: ಕಿಡಿಗೇಡಿಗಳು ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ ಪರಿಣಾಮ‌ ಮೂರು ಗುಡ್ಡಗಳಲ್ಲಿ ಬೆಳೆದಿದ್ದ ಅರಣ್ಯ ಪ್ರದೇಶ ಬೆಂಕಿಯಿಂದ‌ ಹೊತ್ತಿ ಉರಿದ ಘಟನೆ ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು ಗುಡ್ಡದಲ್ಲಿ ಭಾನುವಾರ ಸಂಭವಿಸಿದೆ.

ಅಬ್ಬೂರು ಗುಡ್ಡದಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದ ಪಟ್ಲು ಗುಡ್ಡ, ಕೋಮನಹಳ್ಳಿ ಗುಡ್ಡ ಅರಣ್ಯ ಪ್ರದೇಶಗಳಿಗೆ ವ್ಯಾಪಿಸಿದೆ.

ADVERTISEMENT

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ರಾಮನಗರ- ಚನ್ನಪಟ್ಟಣ ಬೈಪಾಸ್ ರಸ್ತೆ ಸನಿಹದಲ್ಲೇ ಇರುವ ಈ‌ ಗುಡ್ಡಗಳಲ್ಲಿನ ಕಾಡು ಹೊತ್ತಿ ಹುರಿಯುತ್ತಿದ್ದ ದೃಶ್ಯ ಹೆದ್ದಾರಿಯಲ್ಲಿ ಸಂಚರಿಸಿದ ಪ್ರಯಾಣಿಕರಲ್ಲಿ‌ ಆತಂಕ ಮೂಡಿಸಿತು.

ಬೆಂಕಿ ನಂದಿಸಲು ಅರಣ್ಯ ಮತ್ತು ಅಗ್ನಿಶಾಮಕ ದಳದ‌ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.