ADVERTISEMENT

ಶೌಚಾಲಯ ಕಿಟ್ ನೀಡಿ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 14:00 IST
Last Updated 15 ಡಿಸೆಂಬರ್ 2019, 14:00 IST
ವರದರಾಜುಗೌಡರವರ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ಶೌಚಾಲಯ ಕಿಟ್ ಗಳನ್ನು ವಿತರಿಸಲಾಯಿತು
ವರದರಾಜುಗೌಡರವರ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ಶೌಚಾಲಯ ಕಿಟ್ ಗಳನ್ನು ವಿತರಿಸಲಾಯಿತು   

ರಾಮನಗರ: ಸ್ವಚ್ಛ ಭಾರತ್ ಮಿಷನ್‍ಗೆ ಪೂರಕವಾಗಿ ಗಾಂಧಿನಗರದ ಬಡವರಿಗೆ ಶೌಚಾಲಯ ಕಿಟ್‍ ವಿತರಣೆ ಮಾಡಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ವರದರಾಜುಗೌಡ ಅವರುಭಾನುವಾರ ಜನ್ಮದಿನ ಆಚರಿಸಿದರು.

ಬಳಿಕ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಕನಸನ್ನು ನನಸು ಮಾಡಲು ನನ್ನ ಕೈಲಾದ ಅಳಿಲು ಸೇವೆ ಮಾಡುವ ಹಂಬಲ ನನಗಿದೆ. ಹಾಗಾಗಿ ಈ ಹೊಸ ಚಿಂತನೆ ನನ್ನಲ್ಲಿ ಬಂದು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಿಟ್ ವಿತರಣೆ ಮಾಡುತ್ತಿದ್ದೇನೆ’ ಎಂದರು.

‘200ಕ್ಕೂ ಹೆಚ್ಚು ಕುಟುಂಬಗಳಿಗೆ ಹಸಿಕಸ ಮತ್ತು ಒಣಕಸ ವಿಂಗಡಣೆ ಮಾಡುವ ಎರಡು ಬುಟ್ಟಿ ಮತ್ತು ಶೌಚಾಲಯ ಬಳಕೆ ಮತ್ತು ಶುದ್ಧೀಕರಣಕ್ಕೆ ಅಗತ್ಯವಾದ ವಸ್ತುಗಳನ್ನು ಒಳಗೊಂಡ ಕಿಟ್‍ ಅನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದೇನೆ’ ಎಂದರು.

ADVERTISEMENT

ವರದರಾಜುಗೌಡ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರುದ್ರೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್ ಗೌಡ, ಪದಾಧಿಕಾರಿಗಳಾದ ಕಿರಣ್ ಹಳ್ಳಿಮಾಳ, ನಾಗಣ್ಣ, ಮುರುಳೀಧರ್, ಸುಧಾಕರ್, ಜೀವನ್, ಕುಮಾರ್, ಅನಿಲ್, ಭೂಪತಿ, ದಿನ್ನ, ಪ್ರಸನ್ನ, ವಿನಯ್, ವಕೀಲ ವಿನೋದ್ ಭಗತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.