ADVERTISEMENT

ರಾಮನಗರ: ಶಾಲೆಗೆ ಕಾಲಿಟ್ಟ ಚಿಣ್ಣರು, ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 6:35 IST
Last Updated 25 ಅಕ್ಟೋಬರ್ 2021, 6:35 IST
   

ರಾಮನಗರ: ಜಿಲ್ಲೆಯಾದ್ಯಂತ ಸೋಮವಾರ ಕಿರಿಯ ಪ್ರಾಥಮಿಕ ಶಾಲೆಗಳ ಬಾಗಿಲುಗಳು ತೆರೆದಿದ್ದು, ಚಿಣ್ಣರನ್ನು ಅದ್ದೂರಿಯಾಗಿ‌ ಸ್ವಾಗತಿಸಲಾಯಿತು.

ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶಾಲೆಗೆ ಬಂದ ಮಕ್ಕಳಿಗೆ ಗುಲಾಬಿ ಜೊತೆಗೆ ಕೈಗೆ ಸ್ಯಾನಿಟೈಸರ್ ನೀಡಲಾಯಿತು.

ರಾಮನಗರ ತಾಲ್ಲೂಕಿನ‌ ಮದರ್ ಸಾಬ್ ದೊಡ್ಡಿಯಲ್ಲಿ‌ ಮಕ್ಕಳನ್ನು ಕಲಾ ತಂಡಗಳ‌ ಮೆರವಣಿಗೆಯೊಂದಿಗೆ ಶಾಲೆಗೆ ಕರೆತರಲಾಯಿತು. ಮಹಿಳೆಯರು‌ ಕಲಶ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಶಿಕ್ಷಕರು ಮಕ್ಕಳನ್ನು‌ ಬರಮಾಡಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.