ADVERTISEMENT

ಕನಕಪುರ: ನಂಬಿಕೆ ಗಳಿಸಿ ₹72 ಲಕ್ಷ ಸಾಲ ಪಡೆದು ದಂಪತಿ ವಂಚನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 1:47 IST
Last Updated 8 ಡಿಸೆಂಬರ್ 2025, 1:47 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

ಸಾಂದರ್ಭಿಕ ಚಿತ್ರ

ಕನಕಪುರ: ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ರಸ್ತೆಬದಿ ತಳ್ಳುಗಾಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ದಂಪತಿ ಜನರ ವಿಶ್ವಾಸ ಗಳಿಸಿ ₹72 ಲಕ್ಷ ಸಾಲ ಪಡೆದು ವಂಚನೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ADVERTISEMENT

ನಾಗೇಂದ್ರ ಮತ್ತು ಕವಿತಾ ದಂಪತಿ ಗೋಬಿ ಅಂಗಡಿ ಹಾಕಿಕೊಂಡು ಬೀದಿಯಲ್ಲಿ ವ್ಯಾಪಾರ ಮಾಡುತ್ತಾ, ಗ್ರಾಮದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನಿವೇಶನ ಖರೀದಿಸಿ ಮನೆ ಕಟ್ಟುವ ಅಗತ್ಯವಿದೆ ಎಂಬ ಕಾರಣ ಹೇಳಿ ತಮಗೆ ಪರಿಚಿತರಾದ ಸುಮಾರು 15 ಜನರಿಂದ ಒಟ್ಟು ₹72ಲಕ್ಷ ಸಾಲ‌‌ ಪಡೆದಿದ್ದರು.

ಹಣವನ್ನು ಒಟ್ಟುಗೂಡಿಸಿಕೊಂಡ ನಂತರ ಈ ದಂಪತಿ ರಾತ್ರೋರಾತ್ರಿ ಗ್ರಾಮವನ್ನು ತೊರೆದು ಪರಾರಿಯಾಗಿದ್ದಾರೆ. ಸಾಲ ಕೊಟ್ಟು ಮೋಸ ಹೋದ ದಿವ್ಯಶ್ರೀ ನೀಡಿದ ದೂರಿನ ಆಧಾರದ ಮೇರೆಗೆ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ದಂಪತಿ ವಿರುದ್ಧ ವಂಚನೆಯ ಪ್ರಕರಣ ದಾಖಲಾಗಿದೆ.

ರಸ್ತೆ ಬದಿಯಲ್ಲಿ ತಳ್ಳು ಗಾಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ದಂಪತಿಗಳು ಜನರ ವಿಶ್ವಾಸಗಳಿಸಿ 72 ಲಕ್ಷ ಸಾಲ ಪಡೆದು ವಂಚನೆ ಮಾಡಿ ಪರಾರಿಯಾಗಿರುವುದು ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದ ನಾಗೇಂದ್ರ ಮತ್ತು ಕವಿತಾ ದಂಪತಿಗಳು 15 ಜನರಿಂದ 72 ಲಕ್ಷ ಸಾಲ ಪಡೆದು ರಾತ್ರೋರಾತ್ರಿ ಪರಾರಿಯಾಗಿ ವ್ಯಕ್ತಿಗಳಾಗಿದ್ದಾರೆ.

ಇವರು ಕೋಡಿಹಳ್ಳಿಯಲ್ಲಿ ಗೋಬಿ ಅಂಗಡಿ ಹಾಕಿಕೊಂಡು ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಾ ಕೋಡಿಹಳ್ಳಿ ಗ್ರಾಮದಲ್ಲಿ ಹತ್ತು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ನಿವೇಶನ ಖರೀದಿಸಿ ಮನೆ ಕಟ್ಟಲು ಹಣದ ಅವಶ್ಯಕತೆ ಇದೆ ಎಂದು ತಮಗೆ ಪರಿಚಯ ಇರುವ ಸುಮಾರು 15 ಜನರಿಂದ ಸುಮಾರು 72 ಲಕ್ಷ ರೂಪಾಯಿ ಸಾಲ ಪಡೆದು ಹಣವನ್ನು ಒಟ್ಟುಗೂಡಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.

ಸಾಲ ಕೊಟ್ಟು ಮೋಸ ಹೋದ ದಿವ್ಯಶ್ರೀ ನೀಡಿದ ದೂರಿನ ಮೇರೆಗೆ ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿ ದಂಪತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.