ರಾಮನಗರ: ಭಾನುವಾರ ಮೇಕೆದಾಟು ಪಾದಯಾತ್ರೆಗೆ ಬಂದ ಅಷ್ಟೂ ಜನರಿಗೆ ಕಾಂಗ್ರೆಸ್ ಊಟೋಪಚಾರದ ವ್ಯವಸ್ಥೆ ಮಾಡಿತ್ತು.
ಬೆಳಿಗ್ಗೆ ಕಾರ್ಯಕ್ರಮದ ವೇದಿಕೆ ಬಳಿ ಉಪ್ಪಿಟ್ಟು, ಕೇಸರಿಬಾತ್, ರೈಸ್ ಬಾತ್ ಉಪಾಹಾರ ದೊರೆಯಿತು.
ಮಧ್ಯಾಹ್ನ ಹೆಗ್ಗನೂರಿನಲ್ಲಿ ರಾಗಿಮುದ್ದೆ, ಕಾಳು ಸಾಂಬಾರ್, ಪೂರಿ, ತರಕಾರಿ ಪುಲಾವ್ ಜೊತೆಗೆ ವಡೆ ಹಾಗೂ ಮೈಸೂರು ಪಾಕ್ ಉಣಬಡಿಸಲಾಯಿತು.
ಇದಲ್ಲದೆ ದಾರಿಯುದ್ದಕ್ಕೂ ಜನರಿಗೆ ಬೆಲ್ಲದ ಪಾನಕ, ನಿಂಬೆ ಷರಬತ್ತು, ಕಬ್ಬಿನ ಜ್ಯೂಸ್, ಕಿತ್ತಳೆ ಹಣ್ಣು ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.