ADVERTISEMENT

ಚನ್ನಪಟ್ಟಣ ನಗರಸಭೆ ಚುನಾವಣೆ: ಅಧಿಕಾರದತ್ತ ಜೆಡಿಎಸ್

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 7:21 IST
Last Updated 30 ಏಪ್ರಿಲ್ 2021, 7:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಮನಗರ: ಎಚ್.ಡಿ. ಕುಮಾರಸ್ವಾಮಿ‌ ಶಾಸಕರಾಗಿರುವ ಚನ್ನಪಟ್ಟಣದ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯುವುದು ಬಹುತೇಕ ನಿಶ್ಚಿತವಾಗಿದೆ.

ಈವರೆಗೆ 28 ವಾರ್ಡುಗಳ ಫಲಿತಾಂಶ ಪ್ರಕಟ ಆಗಿದ್ದು, 16ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. 7ರಲ್ಲಿ ಕಾಂಗ್ರೆಸ್ ಹಾಗೂ 5ರಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಇನ್ನು 3 ವಾರ್ಡುಗಳ ಫಲಿತಾಂಶ ಬಾಕಿ‌ ಇದೆ.

ವಿಜಯಪುರ ಪುರಸಭೆ ಚುನಾವಣೆ ಫಲಿತಾಂಶ ಪ್ರಕಟ: ಜೆಡಿಎಸ್-13, ಕಾಂಗ್ರೆಸ್-7 ಪಕ್ಷೇತರ-2, ಬಿಜೆಪಿ -1 ವಾರ್ಡಿನಲ್ಲಿ ಗೆಲುವು ಸಾಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.