ADVERTISEMENT

ಜಾನಪದ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಬೇಗೂರು ಶಿವಪ್ಪ

-

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 16:05 IST
Last Updated 18 ಜನವರಿ 2024, 16:05 IST
ಬೇಗೂರು ಶಿವಪ್ಪ
ಬೇಗೂರು ಶಿವಪ್ಪ   

ಶಿವಮೊಗ್ಗ: ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಜ.26ರಂದು ಸೊರಬ ತಾಲ್ಲೂಕು ಕೋಟಿಪುರದ ಎವರಾನ್‌ ಇಂಟರ್‌ ನ್ಯಾಷನಲ್‌ ರೆಸಿಡೆನ್ಸಿ ಶಾಲೆಯಲ್ಲಿ ನಡೆಯಲಿರುವ ಐದನೇ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕಾರಿಪುರದ ಈಸೂರಿನ ಲಾವಣಿ ಕಲಾವಿದ ಬೇಗೂರು ಶಿವಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ  ಡಿ.ಮಂಜುನಾಥ ತಿಳಿಸಿದ್ದಾರೆ.

ತಮ್ಮ ಸಿರಿಕಂಠದಿಂದ ಹೊರಹೊಮ್ಮುವ ಲಾವಣಿ, ಗೀಗೀ ಪದ, ಜನಪದ ಗೀತೆಗಳಿಂದ ಜನಜನಿತರಾದ ಶಿವಪ್ಪ ಅವರು ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಸಾಹಿತ್ಯದ ಹಾಗೂ ಜಾನಪದದ ಅಭಿರುಚಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT