ADVERTISEMENT

ಶಿವಮೊಗ್ಗ: ಇವರು ಇಂದಿಗೂ ಸಂತ್ರಸ್ತರೇ!

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 21:12 IST
Last Updated 15 ಆಗಸ್ಟ್ 2020, 21:12 IST
ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ವರ್ಷದ ಹಿಂದೆ ಬಿದ್ದ ಮನೆ ಇನ್ನೂ ದುರಸ್ತಿ ಕಂಡಿಲ್ಲ
ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ವರ್ಷದ ಹಿಂದೆ ಬಿದ್ದ ಮನೆ ಇನ್ನೂ ದುರಸ್ತಿ ಕಂಡಿಲ್ಲ   

ಶಿವಮೊಗ್ಗ: ವರ್ಷದ ಹಿಂದೆ ತುಂಗಾ ನದಿ ಪ್ರವಾಹದಿಂದ ಸೂರುಕಳೆದುಕೊಂಡು ಸಂತ್ರಸ್ತರಾಗಿದ್ದಶಿವಮೊಗ್ಗ ನಗರದಬಹುತೇಕ ನಾಗರಿಕರುಇಂದಿಗೂಬಯಲಲ್ಲಿ ನಿಕೃಷ್ಟ ಜೀವನಸಾಗಿಸುತ್ತಿದ್ದಾರೆ.

ಪಾಲಿಕೆ ವ್ಯಾಪ್ತಿಯ ವಿವಿಧ ಬಡಾವಣೆಗಳ1,355 ಮನೆಗಳಿಗೆ ಹಾನಿಯಾಗಿತ್ತು. 801 ಮನೆಗಳು ಸಂಪೂರ್ಣ ಕುಸಿದಿದ್ದವು. ಅಂದು ತಾತ್ಕಾಲಿಕ ಪರಿಹಾರವಾಗಿ ನಗರ ಪಾಲಿಕೆ ₹ 2.55 ಕೋಟಿ ಪರಿಹಾರ ಒದಗಿಸಿತ್ತು. ಸಂಪೂರ್ಣ ಹಾನಿಯಾದ ಮನೆಗಳಿಗೆ ತಲಾ ₹ 5 ಲಕ್ಷ ನೀಡಲು ತಾಲ್ಲೂಕು ಆಡಳಿತಕ್ಕೆ ಜವಾಬ್ದಾರಿ ನೀಡಲಾಗಿತ್ತು.ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಹಣಕಾಸು ಸೌಲಭ್ಯ ಒದಗಿಸಲು ಸೂಚಿಸಲಾಗಿತ್ತು.

ಸಂಪೂರ್ಣ ಕುಸಿದ ಮನೆಗಳಲ್ಲಿ ಶೇ 10ರಷ್ಟು ಮನೆಗಳೂ ಪೂರ್ಣವಾಗಿಲ್ಲ. ಕೆಲವು ಸಂತ್ರಸ್ತರಿಗೆ ₹ 1 ಲಕ್ಷ, ಕೆಲವರಿಗೆ ₹ 2 ಲಕ್ಷ ಬಂದಿದೆ. ಹಲವು ಮನೆಗಳು ಇನ್ನೂ ಬುನಾದಿಯ ಮಟ್ಟದಲ್ಲೇ ಇವೆ. ಕೆಲವರು ಅರ್ಧಂಬರ್ಧ ಗೋಡೆ ನಿರ್ಮಿಸಿಕೊಂಡಿದ್ದಾರೆ.

ADVERTISEMENT

ಜಿಲ್ಲೆಯ ಗ್ರಾಮೀಣ ಭಾಗದಲ್ಲೂಸಂಪೂರ್ಣ ಹಾನಿಯಾಗಿದ್ದ 249 ಮನೆಗಳಿಗೆ ₹ 5 ಲಕ್ಷ ಪರಿಹಾರ ದೊರಕಿಲ್ಲ. ಭಾಗಶಃ ಹಾನಿಯಾಗಿದ್ದ 588 ಮನೆಗಳಿಗೆ ತಲಾ ₹ 50 ಸಾವಿರ ಪರಿಹಾರ ನೀಡಲಾಗಿದೆ.

538 ಶಾಲೆಗಳಿಗೆ ಹಾನಿ:ಪಾಲಿಕೆಯ 87 ಶಾಲೆಗಳೂ ಸೇರಿ ಜಿಲ್ಲೆಯಲ್ಲಿ 538 ಪ್ರಾಥಮಿಕ, ಪ್ರೌಢಶಾಲೆಯ ಕಟ್ಟಡಗಳು ಶಿಥಿಲಗೊಂಡಿದ್ದವು. ಅವುಗಳ ದುರಸ್ತಿಗೆ ₹ 56.76 ಕೋಟಿ ಬಿಡುಗಡೆ ಮಾಡುವಂತೆ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ನಗರದ ಶಾಲೆಗಳಿಗೆ ₹ 15 ಕೋಟಿ ಅನುದಾನ ಸಿಕ್ಕಿದೆ. ಗ್ರಾಮೀಣ ಭಾಗದ50ರಷ್ಟುಶಾಲೆಗಳು ದುರಸ್ತಿ ಕಂಡಿಲ್ಲ.

300 ಕಾಲು ಸಂಕಗಳಿಗೆ ಬೇಡಿಕೆ: 274 ಕಾಲುಸಂಕಗಳನ್ನು ನಿರ್ಮಿಸಲು ₹ 14.39 ಕೋಟಿ ಅನುದಾನ ಬಿಡುಗಡೆ ಮಾಡುವಂತೆಜಿಲ್ಲಾ ಪಂಚಾಯಿತಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಉದ್ಯೋಗ ಖಾತ್ರಿ ಹಾಗೂ14ನೇ ಹಣಕಾಸು ನಿಧಿ ಬಳಸಿಕೊಂಡು 150ಕ್ಕೂ ಹೆಚ್ಚು ಸಂಕಗಳನ್ನುನಿರ್ಮಿಸಲಾಗಿದೆ. ಇನ್ನೂ 300 ಸಂಕಗಳಿಗೆ ಬೇಡಿಕೆಯಿದೆ.

*
ವರ್ಷದ ಹಿಂದೆ ಮನೆ ಕುಸಿದಿದೆ. ಇದುವರೆಗೂ ಪರಿಹಾರ ನೀಡಿಲ್ಲ. ಸುತ್ತಲೂ ಪ್ಲಾಸ್ಟಿಕ್ ಕವರ್ ಕಟ್ಟಿಕೊಂಡು ಜೀವನ ನಡೆಸುತ್ತಿದ್ದೇವೆ. -ಯಲ್ಲಮ್ಮ, ರಾಜೀವ್‌ಗಾಂಧಿ ಬಡಾವಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.