ADVERTISEMENT

ಎಫ್‌ಪಿಎಐ ಕಟ್ಟಡ ಧ್ವಂಸ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 12:17 IST
Last Updated 3 ಫೆಬ್ರುವರಿ 2020, 12:17 IST

ಶಿವಮೊಗ್ಗ:ಗುಂಡಪ್ಪ ಶೆಡ್‌ನಲ್ಲಿರುವಭಾರತೀಯ ಕುಟುಂಬ ಯೋಜನಾ ಸಂಘದ (ಎಫ್‌ಪಿಎಐ) ಆಸ್ಪತ್ರೆಯ ಕಟ್ಟಡದ ಕೆಲವು ಭಾಗಗಳನ್ನುದಿಢೀರ್ ಕೆಡವಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಕಾರ್ಯದರ್ಶಿ ಎಸ್‌.ಬಿ.ಅಶೋಕ್‌ಕುಮಾರ್ ಒತ್ತಾಯಿಸಿದರು.

ಆಸ್ಪತ್ರೆಯ ಶೌಚಾಲಯ, ಸ್ನಾನಗೃಹ, ಕಾಂಪೌಂಡ್‌, ಕಾರ್‌ಶೆಡ್ಕೆಡವಿದ್ದಾರೆ. ಬಡವರಿಗಾಗಿಯೇ ಇರುವ ಸೇವಾಮನೋಭಾವದ ಆಸ್ಪತ್ರೆಯನ್ನುಸ್ಮಾರ್ಟ್‌ಸಿಟಿ ಅಧಿಕಾರಿಗಳು ನೋಟಿಸ್‌ನೀಡದೇ, ಸಂಘದ ಗಮನಕ್ಕೆ ತಾರದೇಧ್ವಂಸ ಮಾಡಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿದೂರದಿರು.

47 ವರ್ಷಗಳಿಂದ ತಾಯಿ-ಮಗುವಿನ ಆರೋಗ್ಯ, ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆಯ ಸೇವೆ ನೀಡುತ್ತಾ ಬಂದಿದೆ.ಗರ್ಭಿಣಿ ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿದೆ. 1974ರಲ್ಲಿ ಆರಂಭವಾದ ಆಸ್ಪತ್ರೆಗೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಗುಂಡಪ್ಪಶೆಡ್‌ ಬಡಾವಣೆಯಲ್ಲಿನಿವೇಶನಮಂಜೂರು ಮಾಡಿತ್ತು.2002ರಲ್ಲೇಸ್ವಂತ ಕಟ್ಟಡ ನಿರ್ಮಿಸಲಾಗಿತ್ತು ಎಂದು ವಿವರ ನೀಡಿದರು.

ADVERTISEMENT

ಕಟ್ಡದ ಸುತ್ತ ಇರುವ ಹೆಚ್ಚುವರಿ ಜಾಗ ಆಸ್ಪತ್ರೆಗೇ ನೀಡುವಂತೆ ಮನವಿ ಮಾಡಿದ್ದೆವು. ಆಸ್ಪತ್ರೆಯ ಸೇವಾ ಮನೋಭಾವ ಗುರುತಿಸಿದ ಪಾಲಿಕೆಯ ಹಿಂದಿನ ಆಯುಕ್ತೆಚಾರುಲತಾ ಸೋಮಲ್ ಸಮ್ಮತಿಸಿದ್ದರು. ಅವರವರ್ಗಾವಣೆಯ ನಂತರ ಬಂದ ಆಯುಕ್ತರು ಆಸ್ಪತ್ರೆಯ ಕಟ್ಟಡಕೆಡವಲು ಸೂಚಿಸಿದ್ದಾರೆ. ಈ ಕೃತ್ಯದ ಹೊಣೆ ಅವರೇ ಹೋರಬೇಕು ಎಂದರು.

ಸಾರ್ವಜನಿಕ ಆಸ್ಪತ್ರೆ ಕಟ್ಟಡ ಕೆಡವಿರುವುದು ಅಮಾನವೀಯ. ಭಾರತೀಯ ಕುಟುಂಬ ಯೋಜನಾ ಸಂಘ ಒಂದು ಅಂತರರಾಷ್ಟ್ರೀಯ ಸಂಸ್ಥೆ. ಕಟ್ಟಡದ ಧ್ವಂಸದಿಂದ ₨ 20 ಲಕ್ಷ ನಷ್ಟವಾಗಿದೆ. ಈ ಕೃತ್ಯಜಿಲ್ಲಾಧಿಕಾರಿ ಗಮನಕ್ಕೂ ಬಂದಿಲ್ಲ. ಇದೊಂದು ನೀಚ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿಸಂಘದ ಅಧ್ಯಕ್ಷೆ ಪುಷ್ಪಾಶೆಟ್ಟಿ, ಪದಾಧಿಕಾರಿಗಳಾದ ಪ್ರೊ.ಚಂದ್ರಶೇಖರ್, ಭಾರತೀ ಚಂದ್ರಶೇಖರ್, ಕಿರಣ್ ದೇಸಾಯಿ, ಉಮೇಶ್ ಆರಾಧ್ಯ, ರಮೇಶ್ ಬಾಬು ಜಾಧವ್, ಎ.ಎಸ್.ಹನುಮಾನ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.