ADVERTISEMENT

ಶಿರಾ: ಲಾರಿಗೆ ಸಿಲುಕಿ ಚಿರತೆ ಸಾವು 

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 2:32 IST
Last Updated 23 ಡಿಸೆಂಬರ್ 2020, 2:32 IST
ಮೃತಪಟ್ಟ ಚಿರತೆ
ಮೃತಪಟ್ಟ ಚಿರತೆ   

ಶಿರಾ (ತುಮಕೂರು): ತಾಲ್ಲೂಕಿನ ತಾವರೆಕೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ- 48ರಲ್ಲಿಮಂಗಳವಾರ ರಾತ್ರಿ ಲಾರಿಗೆ ಸಿಲುಕಿ ನಾಲ್ಕು ವರ್ಷದ ಚಿರತೆ ಮೃತ ಪಟ್ಟಿದೆ.

ಲಾರಿ ಶಿರಾ ಕಡೆಯಿಂದ ಹಿರಿಯೂರು ಕಡೆ ಹೋಗುತ್ತಿತ್ತು. ಚಾಲಕ ಲಾರಿ ನಿಲ್ಲಿಸದೆ ಪರಾರಿಯಾಗಿದ್ದಾರೆ.

ಲಕ್ಷ್ಮಿಸಾಗರ, ಚೀಲನಹಳ್ಳಿ, ತಾವರೆಕೆರೆ ಗ್ರಾಮಗಳ ಸುತ್ತಮುತ್ತ ಚಿರತೆ ಕಾಟ ಇದೆ ಎಂಬ ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯಲು ಬೋನು ಇಟ್ಟಿದ್ದರು.

ADVERTISEMENT

ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯಾಧಿಕಾರಿ ರಾಧಾ ಹಾಗೂ ಸಿಬ್ಬಂದಿ ಸ್ಥಳೀಯರಿಂದ ಮಾಹಿತಿ ಪಡೆದರು. ಚಿರತೆ ಶವವನ್ನು ಮರಣೋತ್ತರ ಪರೀಕ್ಷೆಗಾಗಿಪಶು ಆಸ್ಪತ್ರೆಗೆ ಸಾಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.