ADVERTISEMENT

ತುಮಕೂರು | ಬೈಕ್‌ ಅಪಘಾತ: ಇಬ್ಬರು ಸಾವು

ಊರ್ಡಿಗೆರೆ ಹೋಬಳಿ ಸಾತಘಟ್ಟ ಬಳಿ ಶನಿವಾರ ಸಂಜೆ ಎರಡು ಬೈಕ್‌ಗಳ ಮಧ್ಯೆ ನಡೆದ ಅಪಘಾತ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 17:17 IST
Last Updated 13 ಆಗಸ್ಟ್ 2022, 17:17 IST
   

ತುಮಕೂರು: ತಾಲ್ಲೂಕಿನ ಊರ್ಡಿಗೆರೆ ಹೋಬಳಿ ಸಾತಘಟ್ಟ ಬಳಿ ಶನಿವಾರ ಸಂಜೆ ಎರಡು ಬೈಕ್‌ಗಳ ಮಧ್ಯೆ ನಡೆದ ಅಪಘಾತದಲ್ಲಿ ಇಬ್ಬರು ಸವಾರರು ಮೃತಪಟ್ಟಿದ್ದಾರೆ.

ಬೆಂಗಳೂರಿನ ನಿರಂಜನ್‌ (31), ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ಹನುಮಂತಗಿರಿ ನಿವಾಸಿ ಗಂಗರಾಜು (41) ಮೃತ ದುರ್ದೈವಿಗಳು.

ಊರ್ಡಿಗೆರೆಯಿಂದ ಕೋಳಾಲ ಕಡೆಗೆ ತೆರಳುತ್ತಿದ್ದ ಪಲ್ಸರ್‌ ಬೈಕ್‌ ಮತ್ತು ಕೊಳಾಲದಿಂದ ಊರ್ಡಿಗೆರೆ ಕಡೆ ಬರುತ್ತಿದ್ದ ಪ್ಯಾಷನ್‌ ಪ್ರೊ ಬೈಕ್‌ ಮುಖಾಮುಖಿಯಾಗಿವೆ. ನಿರಂಜನ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಂಗರಾಜು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ADVERTISEMENT

ನಿರಂಜನ್‌ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹೆಂಡತಿಯ ಊರಿಗೆ ಹೋಗುವಾಗ ಅಪಘಾತ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.