ADVERTISEMENT

ಸಚಿವರ ಶಾಲಾ ವಾಸ್ತವ್ಯ: ಮೋದಿ ಯಾರಂತ ಗೊತ್ತಿಲ್ವಲ್ಲೋ ನಿನಗೆ- ಸುರೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 4:30 IST
Last Updated 20 ಸೆಪ್ಟೆಂಬರ್ 2019, 4:30 IST
   

ಪಾವಗಡ:ನಮ್ಮ ದೇಶದ ಪ್ರಧಾನಿ ಯಾರು ಹೇಳು ಎಂದು ವಿದ್ಯಾರ್ಥಿಯೊಬ್ಬನಿಗೆ ಸಚಿವರು ಪ್ರಶ್ನೆ ಕೇಳಿದರು, ಆ ವಿದ್ಯಾರ್ಥಿ ಉತ್ತರ ಹೇಳದಿದ್ದಾಗಮೋದಿ ಯಾರಂತ ಗೊತ್ತಿಲ್ವಲ್ಲೋ ನಿನಗೆ ಎಂದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ಇಲ್ಲಿನಎನ್.ಅಚ್ಚಮನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ವಾಯು ವಿಹಾರ ಮುಗಿಸಿದ ಬಳಿಕ ಶಾಲಾ ಅಂಗಳಕ್ಕೆ ಬಂದ ಸಚಿವರು ವಿದ್ಯಾರ್ಥಿಗಳು, ಶಿಕ್ಷಕರೊಂದಿಗೆ ಸಂವಾದ ನಡೆಸಿದರು.

ವಿದ್ಯಾರ್ಥಿಯೊಬ್ಬನ ಜೊತೆ ಮಾತನಾಡುತ್ತ,ನಮ್ಮ ದೇಶದ ಪ್ರಧಾನಿ ಯಾರು? ಎಂದು ಪ್ರಶ್ನೆ ಕೇಳಿದರು. ಆಪ್ರಶ್ನೆಯನ್ನು ಮೂರ್ನಾಲ್ಕು ಸಲ ಅರ್ಥೈಸಿ ಕೇಳಿದರೂ ವಿದ್ಯಾರ್ಥಿಯಿಂದ ಉತ್ತರ ಬರಲಿಲ್ಲ! ಕಡೆಗೆ ಪ್ರೈಮ್‌ ಮಿನಿಸ್ಟರ್ ಎಂಬ ಪದ ಬಳಸಿ ಕೇಳಿದರೂ ವಿದ್ಯಾರ್ಥಿಯಿಂದ ಉತ್ತರ ಬರಲೇ ಇಲ್ಲ!ಆಗ ಸಚಿವರು, ಮೋದಿ ಯಾರಂತ ಗೊತ್ತಿಲ್ವಲ್ಲೋ ನಿನಗೆ ಎಂದು ಪ್ರತಿಕ್ರಿಯಿಸಿದರು.

ವಿದ್ಯಾರ್ಥಿಯಿಂದ ಆರರ ಮಗ್ಗಿ ಹೇಳಿಸಿದರು. ಮಗ್ಗಿ ತಪ್ಪಾದ ಕಡೆ ತಿದ್ದಿ ಹೇಳಿದರು.

ಸಂಪಿಗೆ ಗಿಡ ನೆಟ್ಟ ಸಚಿವರು:ವಾಸ್ತವ್ಯ ಹೂಡಿದ ಶಾಲೆಯಿಂದ ಹೊರಡುವ ಮುನ್ನ ಸಚಿವರು ಅಂಗಳದಲ್ಲಿ ಸಂಪಿಗೆ ಗಿಡ ನೆಟ್ಟರು. ಡಿ.ಡಿ.ಪಿ.ಐ. ಹುಣಸೆ ಗಿಡ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.