ADVERTISEMENT

ತುಮಕೂರು: ಅಪಘಾತದಲ್ಲಿ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 23 ಮೇ 2024, 4:29 IST
Last Updated 23 ಮೇ 2024, 4:29 IST
<div class="paragraphs"><p>ಸಾವು </p></div>

ಸಾವು

   

ಪ್ರಾತಿನಿಧಿಕ ಚಿತ್ರ

ತುಮಕೂರು: ನಗರ ಹೊರವಲಯದ ಯಲ್ಲಾಪುರದ ಬಳಿ ಬುಧವಾರ ಬೈಕ್‌ಗೆ ಟ್ಯಾಂಕರ್‌ ಗುದ್ದಿ ಬೈಕ್‌ ಸವಾರ ರಾಘವೇಂದ್ರ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ADVERTISEMENT

ರಾಘವೇಂದ್ರ ಕೋರ ಹೋಬಳಿಯ ಜಿ.ಬೊಮ್ಮನಹಳ್ಳಿಯ ನಿವಾಸಿ. ಯಲ್ಲಾಪುರ ಹತ್ತಿರದ ರೈಸ್‌ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ತುಮಕೂರಿನಿಂದ ಬೈಕ್‌ನಲ್ಲಿ ಬೊಮ್ಮನಹಳ್ಳಿಗೆ ಹೋಗುವಾಗ ಮಧುಗಿರಿ ಕಡೆಯಿಂದ ಬಂದ ಟ್ಯಾಂಕರ್‌ ಡಿಕ್ಕಿಯಾಗಿದೆ. ಅಪಘಾತದ ನಂತರ ಟ್ಯಾಂಕರ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.