ADVERTISEMENT

ಗದ್ದೆಗೆ ಉರುಳಿದ ಕಾರು: ಚಾಲಕ ಪಾರು

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 12:29 IST
Last Updated 10 ಜುಲೈ 2022, 12:29 IST
ಹೆಬ್ರಿ : ಕಾರ್ಕಳ ತಾಲ್ಲೂಕಿನ ಮರ್ಣೆ ಗ್ರಾಮದ ಎಣ್ಣೆಹೊಳೆ ಹಂಚಿಕಟ್ಟೆ ಪಡ್ಡೆಲುಮಾರು ಎಂಬಲ್ಲಿ ಇರ್ಟಿಗಾ ಕಾರೊಂದು ಗದ್ದೆಗೆ ಉರುಳಿದ ಘಟನೆ ಬಾನುವಾರ ನಡೆದಿದೆ .
ಹೆಬ್ರಿ : ಕಾರ್ಕಳ ತಾಲ್ಲೂಕಿನ ಮರ್ಣೆ ಗ್ರಾಮದ ಎಣ್ಣೆಹೊಳೆ ಹಂಚಿಕಟ್ಟೆ ಪಡ್ಡೆಲುಮಾರು ಎಂಬಲ್ಲಿ ಇರ್ಟಿಗಾ ಕಾರೊಂದು ಗದ್ದೆಗೆ ಉರುಳಿದ ಘಟನೆ ಬಾನುವಾರ ನಡೆದಿದೆ .   

ಹೆಬ್ರಿ: ಕಾರ್ಕಳ ತಾಲ್ಲೂಕಿನ ಮರ್ಣೆ ಗ್ರಾಮದ ಎಣ್ಣೆಹೊಳೆ ಹಂಚಿಕಟ್ಟೆ ಪಡ್ಡೆಲುಮಾರು ಎಂಬಲ್ಲಿ ಎರ್ಟಿಗಾ ಕಾರೊಂದು ಗದ್ದೆಗೆ ಉರುಳಿದ ಘಟನೆ ಬಾನುವಾರ ನಡೆದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಅಜೆಕಾರಿನ ಉದ್ಯಮಿಯೊರ್ವರಿಗೆ ಸೇರಿದ ವಾಹನವಾಗಿದ್ದು ಕಾರ್ಕಳದಿಂದ ಅಜೆಕಾರಿಗೆ ಹೋಗುತ್ತಿತ್ತು. ಧಾರಾಕಾರವಾಗಿ ಸುರಿಯುತಿದ್ದ ಮಳೆಯಿಂದಾಗಿ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಪಾಯಕಾರಿ ತಿರುವು: ಪಡ್ಡೆಲುಮಾರು ತಿರುವು ಅಪಾಯಕಾರಿಯಾಗಿದ್ದು, ಕೆಲವು ಸಮಯಗಳಿಂದ ಸರಣಿ ಅಪಘಾತ ‌ನಡೆದಿದ್ದು ಕಳೆದೆರಡು ವರ್ಷಗಳ ಹಿಂದೆ ₹1 ಕೋಟಿ ವೆಚ್ಚದಲ್ಲಿ ರಸ್ತೆಯನ್ನು ವಿಸ್ತರಣೆ ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.