ಉಡುಪಿ: ಜ್ಯೋತಿಷ್ಯ ಹೇಳುವುದಾಗಿ ನಂಬಿಸಿದ ವಂಚಕಿಯೊಬ್ಬಳು ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾಳೆ. ರಾಜೀವ ನಗರದ ಲಕ್ಷ್ಮೀ ವಂಚನೆಗೆ ಒಳಗಾದವರು.
ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಜ್ಯೋತಿಷಿಯ ಸೋಗಿನಲ್ಲಿ ಲಕ್ಷ್ಮೀ ಅವರ ಮನೆಗೆ ಬಂದ ವಂಚಕಿ ಮನೆಗೆ ಯಾರೋ ಮಾಟ ಮಂತ್ರ ಮಾಡಿಸಿದ್ದು, ಕಣ್ಣು ದೃಷ್ಟಿಯಾಗಿದೆ, ಲಕ್ಷ್ಮಿ ಪೂಜೆ ಮಾಡಿಸಿದರೆ ಎಲ್ಲವೂ ಸರಿಹೋಗುತ್ತದೆ ಎಂದು ನಂಬಿಸಿದ್ದಾಳೆ. ಅದರಂತೆ ಮನೆಯಲ್ಲಿದ್ದ ₹ 7.36 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹ 15,000 ಪಡೆದು ಬಾಕ್ಸ್ನಲ್ಲಿ ಹಾಕಿ ಪೂಜೆ ಮಾಡುವ ನಾಟಕವಾಡಿದ್ದಾಳೆ.
ಮನೆಯವರ ಗಮನ ಬೇರೆಡೆ ಸೆಳೆದು ಬಾಕ್ಸ್ನಲ್ಲಿದ್ದ ಹಣ ಹಾಗೂ ಚಿನ್ನಾಭರಣವನ್ನು ಲಪಟಾಯಿಸಿ ಖಾಲಿ ಬಾಕ್ಸ್ ಕೊಟ್ಟು ಪರಾರಿಯಾಗಿದ್ದಾಳೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕಿಯ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.