ADVERTISEMENT

ಪ್ರಧಾನಿಗೆ ದಿಗ್ಭಂಧನ: ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಖಂಡನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 15:31 IST
Last Updated 7 ಜನವರಿ 2022, 15:31 IST
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ   

ಉಡುಪಿ: ವೈರಿದೇಶದ ಪಕ್ಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 20 ನಿಮಿಷಗಳ ಕಾಲ ದಿಗ್ಭಂಧನ ಹಾಕಿದ್ದು ಖಂಡನೀಯ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶ್ರೀಗಳು, ‘ಯಾರೋ ಮಾಡಿದ ಆಚಾತುರ್ಯಕ್ಕೆ ರಾಜನನ್ನು ಕಳೆದುಕೊಂಡರೆ ದೇಶದಲ್ಲಿ ಆಗಬಹುದಾದ ದೊಂಬಿ ಹಾಗೂ ಗಲಾಟೆಯನ್ನು ಊಹಿಸಲು ಅಸಾಧ್ಯ. ಹಿಂದೆ ಇಂತಹ ಅಚಾತುರ್ಯಗಳು ನಡೆದಾಗ ದೊಂಬಿ, ಗಲಾಟೆಗಳನ್ನು ನಡೆದಿದ್ದನ್ನು ಕಂಡಿದ್ದೇವೆ. ಇನ್ನೆಂದೂ ಇಂತಹ ಘಟನೆಗಳು ಮರುಕಳಿಸಬಾರದು’ ಎಂದು ಗುರುಗಳಲ್ಲಿ ಪ್ರಾರ್ಥಿಸುವುದಾಗಿ ಶ್ರೀಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT