ADVERTISEMENT

ಉಡುಪಿ: ಶಯನೀ ಏಕಾದಶಿ ಪ್ರಯುಕ್ತ ಕೃಷ್ಣಮಠದಲ್ಲಿ ಸುದರ್ಶನ ಹೋಮ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 8:25 IST
Last Updated 1 ಜುಲೈ 2020, 8:25 IST
ಕೃಷ್ಣಮಠದಲ್ಲಿ ಬುಧವಾರ ನಡೆದ ಸುದರ್ಶನ ಹೋಮದ ದೃಶ್ಯ
ಕೃಷ್ಣಮಠದಲ್ಲಿ ಬುಧವಾರ ನಡೆದ ಸುದರ್ಶನ ಹೋಮದ ದೃಶ್ಯ   

ಉಡುಪಿ: ಶಯನೀ ಏಕಾದಶಿ ಪ್ರಯುಕ್ತ ಕೃಷ್ಣಮಠದಲ್ಲಿ ಬುಧವಾರ ಸುದರ್ಶನ ಹೋಮ ನಡೆಯಿತು. ಬಳಿಕ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿಯು ಅಷ್ಟಮಠದ ಕೆಲವು ಯತಿಗಳಿಗೆ ತಪ್ತ ಮುದ್ರಾಧಾರಣೆ ಮಾಡಿದರು.

ಪ್ರತಿ ವರ್ಷ ತಪ್ತ ಮುದ್ರಾಧಾರಣೆಯಲ್ಲಿ ರಾಜ್ಯದ ಹಲವೆಡೆಗಳಿಂದ ಭಕ್ತರು ಭಾಗವಹಿಸುತ್ತಿದ್ದರು. ಈ ವರ್ಷ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಭಕ್ತರಿಗೆ ತಪ್ತಮುದ್ರಾಧಾರಣೆ ಇರಲಿಲ್ಲ. ಮಠದೊಳಗೆ ಯತಿಗಳಿಗೆ ಮಾತ್ರ ಮುದ್ರಾಧಾರಣೆ ನಡೆಯಿತು.

ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಕಿರಿಯ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.