ADVERTISEMENT

ಉಡುಪಿ: ಯುನಿಸೆಫ್ ತಂಡದಿಂದ ಕುರುಡಾಯಿ ಕೆರೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 3:00 IST
Last Updated 7 ಜನವರಿ 2026, 3:00 IST
<div class="paragraphs"><p>ಯುನಿಸೆಫ್ ಸಂಸ್ಥೆಯ ತಂಡದಿಂದ ಕುರುಡಾಯಿ ಕೆರೆ ಪರಿಶೀಲನೆ&nbsp;</p></div>

ಯುನಿಸೆಫ್ ಸಂಸ್ಥೆಯ ತಂಡದಿಂದ ಕುರುಡಾಯಿ ಕೆರೆ ಪರಿಶೀಲನೆ 

   

ಶಿರ್ವ: ಕಾಪು ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಭಿವೃದ್ಧಿಗೊಂಡ ಮೂಡುಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಡಾಯಿ ಕೆರೆಯನ್ನು ಯುನಿಸೆಫ್ ಸಂಸ್ಥೆಯ ಎನ್.ಎಲ್. ನರಸಿಂಹ ರೆಡ್ಡಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಗ್ರಾಮೀಣ ಪ್ರದೇಶದಲ್ಲಿರುವ ಕುರುಡಾಯಿ ಕೆರೆಯ ಇತಿಹಾಸ, ಜನರಿಗೆ ಕುಡಿಯುವ ನೀರಿನ ಬಳಕೆ, ಭತ್ತ ಇನ್ನಿತರ ಕೃಷಿಗೆ ನೀರು ಬಳಕೆ, ಅಂತರ್ಜಲ ಮಟ್ಟ ಸುಧಾರಣೆ ಕುರಿತು ಊರಿನ ರೈತರು, ಸುತ್ತಲಿನ ಪರಿಸರದ ಜನರಿಂದ ಅಭಿಪ್ರಾಯ ಸಂಗ್ರಹಣೆ ಮಾಡಿದರು.

ADVERTISEMENT

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಮಹಾಬಲ ಕುಲಾಲ್, ರಾಜ್ಯ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಬೆಳ್ಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಶಿಧರ ವಾಗ್ಲೆ, ಕುರುಡಾಯಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಸದಸ್ಯರಾದ ಸ್ಯಾಮ್ಸನ್, ಭೋಜ ಕುಲಾಲ್, ಪ್ರೇಮಾ, ಕೇಂದ್ರ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಯೋಜನಾಧಿಕಾರಿ ಮಮತಾ ಶೆಟ್ಟಿ, ಎಂಜಿನಿಯರ್ ಪ್ರದೀಪ್, ಸುರೇಶ್ ಡಿಸೋಜ, ಮೇಲ್ವಿಚಾರಕರಾದ ಗೀತಾ, ದೇವೇಂದ್ರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.