ADVERTISEMENT

ಹಂತಕರಿಗೆ ಶಿಕ್ಷೆ: ಎಲ್ಲರೂ ಅಭಿನಂದನಾರ್ಹರು- ಪ್ರತಾಪ್ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 14:46 IST
Last Updated 5 ಏಪ್ರಿಲ್ 2022, 14:46 IST
ಉದ್ಯಮಿ ಆರ್.ಎನ್.ನಾಯಕ ಕೊಲೆ ಪ್ರಕರಣದಲ್ಲಿ ಯಶಸ್ವಿಯಾಗಿ ತನಿಖೆ ನಡೆಸಿದ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಎ.ಡಿ.ಜಿ.ಪಿ ಪ್ರತಾಪ್ ರೆಡ್ಡಿ ಕಾರವಾರದಲ್ಲಿ ಮಂಗಳವಾರ ಪ್ರಶಂಶಾ ಪತ್ರವನ್ನು ನೀಡಿದರು. ಪಶ್ಚಿಮ ವಲಯ ಐ.ಜಿ.ಪಿ ದೇವಜ್ಯೋತಿ ರಾಯ್, ಎಸ್.ಪಿ ಡಾ.ಸುಮನ್ ಪೆನ್ನೇಕರ್, ಎ.ಎಸ್.ಪಿ ಎಸ್.ಬದರಿನಾಥ್ ಇದ್ದಾರೆ
ಉದ್ಯಮಿ ಆರ್.ಎನ್.ನಾಯಕ ಕೊಲೆ ಪ್ರಕರಣದಲ್ಲಿ ಯಶಸ್ವಿಯಾಗಿ ತನಿಖೆ ನಡೆಸಿದ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಎ.ಡಿ.ಜಿ.ಪಿ ಪ್ರತಾಪ್ ರೆಡ್ಡಿ ಕಾರವಾರದಲ್ಲಿ ಮಂಗಳವಾರ ಪ್ರಶಂಶಾ ಪತ್ರವನ್ನು ನೀಡಿದರು. ಪಶ್ಚಿಮ ವಲಯ ಐ.ಜಿ.ಪಿ ದೇವಜ್ಯೋತಿ ರಾಯ್, ಎಸ್.ಪಿ ಡಾ.ಸುಮನ್ ಪೆನ್ನೇಕರ್, ಎ.ಎಸ್.ಪಿ ಎಸ್.ಬದರಿನಾಥ್ ಇದ್ದಾರೆ   

ಕಾರವಾರ: ‘ಉದ್ಯಮಿ ಆರ್.ಎನ್.ನಾಯಕ ಕೊಲೆ ಪ್ರಕರಣದ ತನಿಖೆಯಲ್ಲಿ ಪಾಲ್ಗೊಂಡ ಎಲ್ಲ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನೂ ಸ್ಮರಿಸುತ್ತೇವೆ. ಅವರಿಗೆ ಸಲ್ಲಬೇಕಿರುವ ಪುರಸ್ಕಾರಗಳು ಸಿಗುವಂತೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು’ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವಸ್ಯವಸ್ಥೆ) ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಪ್ರಕರಣದ ತನಿಖೆಯಲ್ಲಿ ಭಾಗವಹಿಸಿದ್ದ ಇಲಾಖೆಯ ಸಿಬ್ಬಂದಿಗೆ, ಕಾರವಾರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪ್ರಶಂಸನಾ ಪತ್ರಗಳನ್ನು ವಿತರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಇದಕ್ಕೂ ಮೊದಲು, ಅಪರಾಧಿಗಳಾದ ಬನ್ನಂಜೆ ರಾಜ ಮತ್ತು ಎಂಟು ಮಂದಿಗೆ ಜೀವಾವಧಿ ಶಿಕ್ಷೆಯಾಗುವಂತೆ ಕಾರ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮತ್ತು ವಿಶೇಷ ಸರ್ಕಾರಿ ಅಭಿಯೋಜಕರೊಂದಿಗೆ ಸಂವಾದ ಹಮ್ಮಿಕೊಂಡರು.

ADVERTISEMENT

‘ಪೊಲೀಸರು ಹಾಗೂ ಅಭಿಯೋಜಕರು ಸಂಘಟಿತವಾಗಿ ಕಾರ್ಯ ನಿರ್ವಹಿಸಿದ ಕಾರಣ ಅಪರಾಧಿಗಳಿಗೆ ಶಿಕ್ಷೆ ಜಾರಿಯಾಗಲು ಸಾಧ್ಯವಾಗಿದೆ. ಹಾಗಾಗಿ ತನಿಖೆಯಲ್ಲಿ ಭಾಗವಹಿಸಿದ ಎಲ್ಲರೂ ಅಭಿನಂದನಾರ್ಹರು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.