ADVERTISEMENT

ಅರಬ್ಬಿ ಸಮುದ್ರದ ಹೆಸರು ಬದಲಿಸಿ: ಬಿಜೆಪಿ ಎಂಎಲ್‌ಸಿ ಶಾಂತರಾಮ ಸಿದ್ದಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 8:29 IST
Last Updated 23 ಡಿಸೆಂಬರ್ 2025, 8:29 IST
ಶಾಂತರಾಮ ಸಿದ್ದಿ
ಶಾಂತರಾಮ ಸಿದ್ದಿ   

ಕಾರವಾರ: ಅರಬ್ಬಿ ಸಮುದ್ರ ವಿದೇಶದ ಹೆಸರು ಹೊಂದಿದ್ದು ಅದರ ಬದಲು ರತ್ನಾಕರ ಸಾಗರ ಎಂದು ಹೆಸರು ಬದಲಿಸಬೇಕು ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಹೇಳಿದರು.

ಇಲ್ಲಿ ನಡೆದ ಕರಾವಳಿ ಉತ್ಸವದಲ್ಲಿ ಅವರು ಹೇಳಿದ್ದಾರೆ.

ಹೆಸರು ಬದಲಿಸುವ ಬಗ್ಗೆ ಸರ್ಕಾರ ಚಿಂತಿಸಬೇಕು. ಅರಬ್ಬಿ ಸಮುದ್ರಕ್ಕೆ ಈ ಹಿಂದೆ ರತ್ನಾಕರ ಸಾಗರ ಎಂದೇ ಕರೆಯಲಾಗುತ್ತಿತ್ತು ಎಂದು ಅವರು ಪ್ರತಿಪಾದಿಸಿದರು.

ADVERTISEMENT

‘ಸಂಸ್ಕೃತಿ ಅಭಿವ್ಯಕ್ತಿಗೆ ಕರಾವಳಿ ಉತ್ಸವ ವೇದಿಕೆಯಾಗಬೇಕು. ಬಡವರು ಹಿಂದುಳಿದವರು ತಮ್ಮ ಕಲಾಪ್ರತಿಭೆ ಪ್ರದರ್ಶಿಸಲು ಅವಕಾಶ ಹೆಚ್ಚಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.