ADVERTISEMENT

ಭಟ್ಕಳ: ಬಸ್‌ಗೆ ಬಡಿದ ಮರದ ಕೊಂಬೆ, ನಿರ್ವಾಹಕ ಸಾವು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 8:38 IST
Last Updated 16 ನವೆಂಬರ್ 2018, 8:38 IST
   

ಭಟ್ಕಳ: ಇಲ್ಲಿನ ಸಾಗರ ರಸ್ತೆಯಲ್ಲಿ ಗುರುವಾರ ತಡರಾತ್ರಿ ಚಲಿಸುತ್ತಿದ್ದ ಕೆಎಸ್ಆರ್‌ಟಿಸಿ ವೋಲ್ವೊ ಹವಾನಿಯಂತ್ರಿತ ಬಸ್‌ಗೆ ಆಲದ ಮರದ ಕೊಂಬೆಯೊಂದು ಬಡಿದಿದೆ. ಅವಘಡದಲ್ಲಿ ಬಸ್‌ನ ನಿರ್ವಾಹಕ, ಬೆಳಗಾವಿಯ ಪಂಚಯ್ಯ ಮಠಪತಿ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಂಗಳೂರು ವಿಭಾಗಕ್ಕೆ ಸೇರಿದ ಬಸ್ ಇದಾಗಿದ್ದು, ಪ್ರಯಾಣಿಕರನ್ನು ಭಟ್ಕಳ ನಿಲ್ದಾಣದಲ್ಲಿ ಇಳಿಸಿ ಡಿಪೋಗೆ ತೆರಳುವಾಗ ಅವಘಡ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT