ADVERTISEMENT

ಜೊಯಿಡಾ: ಉಚಿತ ಆರೋಗ್ಯ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 8:10 IST
Last Updated 24 ಜನವರಿ 2026, 8:10 IST
<div class="paragraphs"><p>ಜೊಯಿಡಾ ತಾಲ್ಲೂಕಿನ ಆವೇಡಾದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು&nbsp;</p></div>

ಜೊಯಿಡಾ ತಾಲ್ಲೂಕಿನ ಆವೇಡಾದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು 

   

ಜೊಯಿಡಾ: ಸಂಜೀವಿನಿ ಸೇವಾ ಟ್ರಸ್ಟ್ ವತಿಯಿಂದ ಕ್ರೂಗರ್ ಫೌಂಡೇಷನ್‌ ಕಾರವಾರ ಹಾಗೂ ಏಕಲ್ ಅಭಿಯಾನ ಸಹಯೋಗದಲ್ಲಿ ಶುಕ್ರವಾರ ಆವೇಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಆವೇಡಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ ಭಗವತಿರಾಜ್ ಕಾರ್ಯಕ್ರಮ ಉದ್ಘಾಟಿಸಿದರು, ಸಂಜೀವಿನಿ ಸೇವಾ ಟ್ರಸ್ಟ್ ಸಂಸ್ಥಾಪಕ ರವಿ ರೇಡ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಬೆಳಗಾವಿ ಏಕಲ್ ಅಭಿಯಾನದ ಡಾ.ವೈಶಾಲಿ ಕಿತ್ತೂರ, ಸ್ತ್ರೀ ರೋಗ ತಜ್ಞೆ ಡಾ.ಮೀನಾ ಕಾಮತ್, ಕಣ್ಣಿನ ತಜ್ಞ ಡಾ.ಶ್ರೇಯಸ್, ಡಾ.ವಸಂತ ಬಾಳಿಗಾ, ಡಾ.ಗಣೇಶ ವಿರಕ್ತಿಮಠ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು.

ಸಂಸ್ಥೆಯ ಜಯಂತ‌ ಗಾವಡಾ, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮೀ ರಂಗಯ್ಯ ಮುರಾರಿ, ರೇಣುಕಾ ಸಿದ್ಧಿ, ಮಹಮ್ಮದ್ ಗೌಸ , ಸಮುದಾಯ ಆರೋಗ್ಯ ಅಧಿಕಾರಿ ಬಾಲಕೃಷ್ಣ,ಶಾಲಾ ಶಿಕ್ಷಕಿ ಉಷಾ ಜೋಶಿ ಮುಂತಾದವರು ಇದ್ದರು.‌

ಶಿಬಿರದಲ್ಲಿ ಆವೇಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಸುಮಾರು 120 ಜನರ ಆರೋಗ್ಯ ತಪಾಸಣೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.