ADVERTISEMENT

ಭಟ್ಕಳ: ಮಾಂಸ ಸಾಗಾಟ, ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಮೇ 2022, 5:11 IST
Last Updated 20 ಮೇ 2022, 5:11 IST

ಭಟ್ಕಳ: ಜಾನುವಾರು ವಧೆ ಮಾಡಿ ಅದರ ಮಾಂಸವನ್ನು ಕಾರಿನಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಗ್ರಾಮೀಣ ಠಾಣೆ ಪೊಲೀಸರು ಶಿರಾಲಿ ಚೆಕ್ ಪೊಸ್ ಬಳಿ ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ಜಾಲಿ ಪಟ್ಟಣದ ಬೆಂಡೆಕಾನ ನಿವಾಸಿ ಸೈಯದ್ ಮೋಹಿದ್ದೀನ್ ಬಂಧಿತ ಆರೋಪಿ. ಜಾಲಿ ಆಜಾದ ನಗರ ನಿವಾಸಿ ಗಜಬರ್ ಸಮೀರ್, ಹೆಬಳೆ ಹನಿಫಾಬಾದ್ ನಿವಾಸಿ ಇಬ್ರಾಹಿಂ ಮುಹಮ್ಮದ ಹುಸೇನ್ ಹಾಗೂ ಜಾಲಿ ತಗ್ಗರಗೋಡ ನಿವಾಸಿ ನಾಸೀರ್ ಪರಾರಿಯಾದ ಆರೋಪಿಗಳಾಗಿದ್ದಾರೆ.

ಆರೋಪಿತರು ಟೊಯೋಟಾ ಇಟೋಯಿನ್ ಕಾರಿನಲ್ಲಿ 80 ಸಾವಿರ ರೂಪಾಯಿ ಮೌಲ್ಯದ ಅಂದಾಜು 400 ಕೆ.ಜಿ ಜಾನುವಾರು ಮಾಂಸವನ್ನು ಸಾಗಾಟ ಮಾಡುವಾಗ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.