ADVERTISEMENT

ಟೇಕ್ವಾಂಡೊ ರಾಜ್ಯಮಟ್ಟದ ಸ್ಪರ್ಧೆಗೆ ಅಣಿ

ಸಾಹಸ ಕ್ರೀಡೆಯಲ್ಲಿ ಪಳಗುತ್ತಿರುವ ಹಳಿಯಾಳದ ವಿದ್ಯಾರ್ಥಿಗಳು

ಸಂತೋಷ ಹಬ್ಬು
Published 16 ಜುಲೈ 2019, 19:30 IST
Last Updated 16 ಜುಲೈ 2019, 19:30 IST
ಹಳಿಯಾಳದ ಸಂದೀಪ ಕರ್ನಾಟಕ ಟೇಕ್ವಾಂಡೊ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿರುವುದು.
ಹಳಿಯಾಳದ ಸಂದೀಪ ಕರ್ನಾಟಕ ಟೇಕ್ವಾಂಡೊ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿರುವುದು.   

ಹಳಿಯಾಳ:ಕ್ರಿಕೆಟ್, ವಾಲಿಬಾಲ್, ಕಬಡ್ಡಿ ಮುಂತಾದ ಒಂದಷ್ಟು ಜನಪ್ರಿಯ ಕ್ರೀಡೆಗಳನ್ನಷ್ಟೇ ಕಂಡಿದ್ದ ಪಟ್ಟಣಕ್ಕೆಟೇಕ್ವಾಂಡೊದ ಪರಿಚಯ ಇರಲಿಲ್ಲ. ಈ ಭಾಗಕ್ಕೆ ಹೊಸದಾದ ಆಟವನ್ನು ತಮ್ಮದಾಗಿಸಿಕೊಂಡ ಪುಟ್ಟ ಬಾಲಕ, ಬಾಲಕಿಯರು ರಾಜ್ಯಮಟ್ಟದ ಸ್ಪರ್ಧೆಗೆ ಅಣಿಯಾಗಿದ್ದಾರೆ.

ಇಲ್ಲಿನಸಂದೀಪ ಫಾಕ್ರೇನ್ನವರ ಅವರು ಮಕ್ಕಳಿಗೆ ಈ ಸಾಹಸ ಕ್ರೀಡೆಯಲ್ಲಿ ತರಬೇತಿ ನೀಡುತ್ತಿದ್ದಾರೆ. ಕೆಲವೇ ತಿಂಗಳ ಹಿಂದೆ ತಮ್ಮಸಂದೀಪ ಅಕಾಡೆಮಿಯ ಮೂಲಕ ಕ್ರೀಡೆಯ ಪಟ್ಟುಗಳನ್ನು ಹೇಳಿಕೊಡಲು ಆರಂಭಿಸಿದರು. ಆರಂಭದಲ್ಲಿಐವರು ಮಕ್ಕಳಿಂದ ಆರಂಭವಾದ ಈ ಅಕಾಡೆಮಿಯಲ್ಲಿ ಈಗ 25 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ.

ನಿರಂತರ ತರಬೇತಿಯಫಲವುಧಾರವಾಡದಲ್ಲಿ ಈಚೆಗೆ ನಡೆದ ‘ಓಪನ್ ಆ್ಯಕ್ಷನ್ ಟೇಕ್ವಾಂಡೊ ಚಾಂಪಿಯನ್‍ಷಿಪ್ 2019’ರಲ್ಲಿ ಕಂಡುಬಂತು. 21 ಮಕ್ಕಳುಹಲವುಬಹುಮಾನಗಳನ್ನು ಹಾಗೂ ಪದಕಗಳನ್ನು ಜಯಿಸಿದರು. ಈ ಮೂಲಕ ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡರು.

ADVERTISEMENT

‘ಆ.8ರಂದು ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ 37ನೇ ರಾಜ್ಯಮಟ್ಟದ ಸಬ್ ಜ್ಯೂನಿಯರ್ ಕೆಡೆಟ್ ಚಾಂಪಿಯನ್‍ಷಿಪ್‍ನ ಟೇಕ್ವಾಂಡೋಡೊ ಸ್ಪರ್ಧೆ ಆಯೋಜನೆಗೊಂಡಿದೆ. ಅದರಲ್ಲಿ ನಮ್ಮ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಸಂತೋಷದ ಸಂಗತಿ. ಕ್ರೀಡಾಪಟುಗಳಿಗೆ ಹೆಚ್ಚಿನ ಸಹಾಯ, ಸೌಲಭ್ಯ ಒದಗಿಸಲಾಗುವುದು’ಎಂದು ಟೇಕ್ವಾಂಡೊಅಕಾಡೆಮಿಯ ಮಾರ್ಗದರ್ಶಕರಾದ ಅಪ್ಪು ಚರಂತಿಮಠ ಹಾಗೂ ಶೀತಲ್ ಅಗಸಿಮನಿತಿಳಿಸಿದರು.

‘ವಿರಕ್ತ ಮಠದ ಆವರಣದಲ್ಲಿ ದಿನವೂ ಸಾಯಂಕಾಲ ಟೇಕ್ವಾಂಡೊತರಬೇತಿ ನೀಡಲಾಗುತ್ತಿದೆ. ವಿ.ವಿ.ಡಿ ಸ್ಕೂಲ್ ಆಫ್ ಎಕ್ಸಲೆನ್ಸ್‌ನಲ್ಲೂ ವಾರಕ್ಕೆ ಎರಡು ದಿನ ಈ ಕ್ರೀಡೆಯನ್ನು ಕಲಿಸಲಾಗುತ್ತಿದೆ. ಟೇಕ್ವಾಂಡೋಕಲಿಯುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಆಗುತ್ತದೆ. ಇದು ಒಲಿಂಪಿಕ್ ಕೂಟದಲ್ಲೂ ಸ್ಥಾನ ಪಡೆದಿದೆ’ ಎಂದು ತರಬೇತುದಾರಸಂದೀಪ ಫಾಕ್ರೇನ್ನವರ ಹೇಳಿದರು.

ಪ್ರತಿ ಆರು ತಿಂಗಳಿಗೊಮ್ಮೆ ಮಕ್ಕಳ ಟೇಕ್ವಾಂಡೊಶ್ರೇಣಿ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ. ಈಗಾಗಲೇ ಮಕ್ಕಳು ಟೇಕ್ವಾಂಡೊದ ಕುರಿಯೋಗಿ, ಪುಮ್ಸೆ ಮತ್ತು ಸೈರಿಂಗ್ ವಿಭಾಗದಲ್ಲಿ ತರಬೇತಿ ಪಡೆದಿದ್ದಾರೆ ಎಂದುಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.