ADVERTISEMENT

ಶಿರಸಿ: ಮಳೆ ಅವಾಂತರಕ್ಕೆ ಕಬ್ಬಿನ ಗದ್ದೆ ನಾಶ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 16:22 IST
Last Updated 21 ನವೆಂಬರ್ 2021, 16:22 IST
ಅತಿಯಾದ ಮಳೆಗೆ ಶಿರಸಿ ತಾಲ್ಲೂಕಿನ ಸರಗುಪ್ಪ ಗ್ರಾಮದ ರಮಾಕಾಂತ ನಾಯ್ಕ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆ ನಾಶವಾಗಿರುವದು.
ಅತಿಯಾದ ಮಳೆಗೆ ಶಿರಸಿ ತಾಲ್ಲೂಕಿನ ಸರಗುಪ್ಪ ಗ್ರಾಮದ ರಮಾಕಾಂತ ನಾಯ್ಕ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆ ನಾಶವಾಗಿರುವದು.   

ಶಿರಸಿ: ತಾಲ್ಲೂಕಿನಲ್ಲಿ ರಭಸದ ಮಳೆ ಇಳಿಮುಖವಾಗಿದ್ದರೂ ಆಗಾಗ ಬೀಳುವ ಮೂಲಕ ಕೃಷಿ ಚಟುವಟಿಕೆಗೆ ಹಿನ್ನೆಡೆ ಉಂಟುಮಾಡುತ್ತಿದೆ.

ಎರಡು ದಿನಗಳಿಂದ ಸುರಿದ ಮಳೆಯ ಪರಿಣಾಮ ದೇವನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರಗುಪ್ಪದ ರಾಮನಾಥ ನಾಯ್ಕ ಎಂಬುವವರ ಒಂದು ಎಕರೆಯಷ್ಟು ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಬ್ಬು ನೆಲಕಚ್ಚಿದೆ. ಮಳೆಯಿಂದ ಭಾರವಾದ ಕಬ್ಬಿನ ಗಿಡಗಳು ಅಲ್ಲಲ್ಲಿ ಮುರಿದು ಬಿದ್ದಿವೆ. ಭತ್ತ, ಮೆಕ್ಕೆಜೋಳದ ಗದ್ದೆಗೆ ಹಾನಿ ಪ್ರಮಾಣ ಏರಿಕೆಯಾಗುತ್ತಿದೆ.

ಮಳೆಯ ರಭಸಕ್ಕೆ ತಾಲ್ಲೂಕಿನಲ್ಲಿ ಸುಮಾರು ನಾಲ್ಕು ಮನೆಗಳಿಗೆ ಹಾನಿ ಉಂಟಾಗಿದೆ. ದಾಸನಕೊಪ್ಪದ ಮಾದೇವಿ ಭೋವಿ ವಡ್ಡರ ಅವರಿಗೆ ಸೇರಿದ ಮನೆಯ ಮುಂಭಾಗ ಕುಸಿದು ಬಿದ್ದಿದೆ. ಮಡಿಕೇಶ್ವರದ ಬಂಗಾರಪ್ಪ ಚೆನ್ನಯ್ಯ ಅವರ ಮನೆಗೆ ಭಾಗಶಃ ಹಾನಿ ಉಂಟಾಗಿದ್ದು, ಪರಶುರಾಮ ಕೆರಿಯಮ್ಮನವರ ಅವರ ಮನೆಯ ಗೋಡೆ ಪೂರ್ಣ ಕುಸಿದು ಬಿದ್ದಿದೆ. ಜಾನ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನವಿಲಗಾರ ಗ್ರಾಮದ ಗುತ್ಯಾ ಚಲವಾದಿ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.