ADVERTISEMENT

ದಾಂಡೇಲಿಯಲ್ಲಿ ಮರಕ್ಕೆ ಸೈಕಲ್‌ ಡಿಕ್ಕಿಯಾಗಿ ಛತ್ತೀಸಗಡ ಯುವತಿ ಸಾವು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 14:44 IST
Last Updated 3 ಮಾರ್ಚ್ 2022, 14:44 IST
ದೇವಿಕಾ ಸಂಜಯ ವಾಸ್ವಾನಿ
ದೇವಿಕಾ ಸಂಜಯ ವಾಸ್ವಾನಿ   

ದಾಂಡೇಲಿ: ಇಳಿಜಾರಿನಲ್ಲಿ ಸೈಕಲ್ ನಿಯಂತ್ರಣಕ್ಕೆ ಸಿಗದೆ ಮರಕ್ಕೆ ಡಿಕ್ಕಿ ಹೊಡೆದು ಛತ್ತೀಸಗಡ ಮೂಲದ ದೇವಿಕಾ ಸಂಜಯ ವಾಸ್ವಾನಿ (25) ಎಂಬುವವರು ಸಮೀಪದ ಬೀರಂಪಾಲಿ ಬಳಿ ಬುಧವಾರ ಸಂಜೆ ಮೃತಪಟ್ಟಿದ್ದಾರೆ.

ಬೀರಂಪಾಲಿ ಗ್ರಾಮದಲ್ಲಿರುವ ಹೋಂ ಸ್ಟೇದಿಂದ ಸೈಕ್ಲಿಂಗ್ ಮಾಡುತ್ತಾ ಅವರು ಅಕೋಡಾ ಗ್ರಾಮದ ಕಡೆ ಹೋಗುತ್ತಿದ್ದರು. ಆಗ ಸೈಕಲ್ ಸ್ಕಿಡ್‌ ಆಗಿ, ವೇಗವನ್ನು ನಿಯಂತ್ರಿಸಲಾಗಲಿಲ್ಲ. ಬಳಿಕ, ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಸೈಕಲ್ ಡಿಕ್ಕಿ ಹೊಡೆಯಿತು. ಅವರ ಬಲ ತೋಳು, ತಲೆಯ ಹಿಂಬದಿಗೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿ ಅವರು ಮೃತಪಟ್ಟರು.

ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.