ADVERTISEMENT

ಕೂಡ್ಲಿಗಿ: ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2022, 6:59 IST
Last Updated 18 ಡಿಸೆಂಬರ್ 2022, 6:59 IST
   

ಕೂಡ್ಲಿಗಿ (ವಿಜಯನಗರ): ತಾಲ್ಲೂಕಿನ ವಿರುಪಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಭಾನುವಾರ ಬೆಳಿಗ್ಗೆ ಕಾರೊಂದು ಹೊತ್ತಿ ಉರಿದಿದೆ.

ಎಂ.ಬಿ. ಅಯ್ಯನಹಳ್ಳಿ ಗ್ರಾಮದವರು ಕೂಡ್ಲಿಗಿ ಕಡೆಗೆ ಹೋಗುವಾಗ ವಿರುಪಾಪುರ ಬಳಿ‌ ಎಂಜಿನ್ ನಲ್ಲಿ ದೋಷ ಕಾಣಿಸಿಕೊಂಡು ನಿಂತಿದೆ.

ಒಳಗಿದ್ದವರೆಲ್ಲ ಹೊರಗೆ ಬರುತ್ತಿದ್ದಂತೆ ಕಾರು ಧಗಧಗನೆ ಹೊತ್ತಿ ಉರಿದಿದೆ‌ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.