ADVERTISEMENT

ಹೊಸಪೇಟೆ: ಹಂಪಿ ಕೃಷ್ಣ ಬಜಾರ ತೋಟದಲ್ಲಿ ಬೆಂಕಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 12:43 IST
Last Updated 4 ಮಾರ್ಚ್ 2023, 12:43 IST
ಹಂಪಿ ಕೃಷ್ಣ ಬಜಾರ ಸಮೀಪದ ಬಾಳೆ ತೋಟದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ.
ಹಂಪಿ ಕೃಷ್ಣ ಬಜಾರ ಸಮೀಪದ ಬಾಳೆ ತೋಟದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ.   

ಹೊಸಪೇಟೆ (ವಿಜಯನಗರ): ವಿಶ್ವಪ್ರಸಿದ್ಧ ಹಂಪಿ ಕೃಷ್ಣ ಬಜಾರ ಸಮೀಪದ ಬಾಳೆ ತೋಟದಲ್ಲಿ ಶನಿವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ.

ತೋಟಕ್ಕೆ ಹೊಂದಿಕೊಂಡಂತೆ ಕುರುಚಲು ಕಾಡು ಇದೆ. ಇಡೀ ಪರಿಸರ ಒಣಗಿ ಹೋಗಿತ್ತು. ಅದರಿಂದ ತೋಟಕ್ಕೆ ಬೆಂಕಿ ಆವರಿಸಿಕೊಂಡಿದೆ. ಬೆಂಕಿ ಕಂಡು ಸ್ಥಳೀಯರೇ ನೀರು ಎರಚಿ ನಂದಿಸಿದರು. ಇದರಿಂದಾಗಿ ತೋಟದ ಇತರೆ ಭಾಗಕ್ಕೆ ಬೆಂಕಿ ವ್ಯಾಪಿಸಿಕೊಳ್ಳಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇನ್ನಷ್ಟೇ ನಷ್ಟದ ಪ್ರಮಾಣ ಗೊತ್ತಾಗಬೇಕಿದೆ. ಇತ್ತೀಚೆಗೆ ಅಕ್ಕ–ತಂಗಿಯರ ಗುಡ್ಡದ ಬಳಿಯೂ ಬೆಂಕಿ ಹೊತ್ತಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT