ADVERTISEMENT

ಹರಪನಹಳ್ಳಿ ಮಳೆ: 200 ಎಕರೆ ಭತ್ತದ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 6:03 IST
Last Updated 10 ಅಕ್ಟೋಬರ್ 2025, 6:03 IST
ಹರಪನಹಳ್ಳಿ ತಾಲ್ಲೂಕು ಪುಣಬಗಟ್ಟಿ ಗ್ರಾಮದ ಕೆರೆ ಕೋಡಿ ಬಿದ್ದಿರುವುದು, ಇದರಿಂದ 200 ಎಕರೆಯಷ್ಟು ಭತ್ತದ ಬೆಳೆ ನಾಶವಾಗಿದೆ  –ಪ್ರಜಾವಾಣಿ ಚಿತ್ರ
ಹರಪನಹಳ್ಳಿ ತಾಲ್ಲೂಕು ಪುಣಬಗಟ್ಟಿ ಗ್ರಾಮದ ಕೆರೆ ಕೋಡಿ ಬಿದ್ದಿರುವುದು, ಇದರಿಂದ 200 ಎಕರೆಯಷ್ಟು ಭತ್ತದ ಬೆಳೆ ನಾಶವಾಗಿದೆ  –ಪ್ರಜಾವಾಣಿ ಚಿತ್ರ   

ಹರಪನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ವಿವಿಧೆಡೆ ಬುಧವಾರ ಮಧ್ಯರಾತ್ರಿ ಸುರಿದ ಮಳೆಗೆ ಪುಣಬಗಟ್ಟಿ ಗ್ರಾಮದಲ್ಲಿ ಕೆರೆ ಕೋಡಿ ಬಿದ್ದು 200ಕ್ಕೂ ಅಧಿಕ ಎಕರೆ ಭತ್ತದ ಬೆಳೆ ನಾಶವಾಗಿದೆ.

ತಾಲ್ಲೂಕಿನ ಅರಸೀಕೆರೆ ಹೋಬಳಿಯ ಪುಣಬಘಟ್ಟ, ಕುರೆಮಾಗನಹಳ್ಳಿ, ತುಂಬಿಗೆರೆ, ಉಚ್ಚಂಗಿದುರ್ಗ ಗ್ರಾಮಗಳಲ್ಲಿ ಬುಧವಾರ ರಾತ್ರಿ ಉತ್ತಮ ಮಳೆ ಸುರಿದಿತ್ತು. ಇದರಿಂದ ಕುರೆಮಾಗನಹಳ್ಳಿಯಲ್ಲಿ ಚೆಕ್ ಡ್ಯಾಂ ಭರ್ತಿಯಾಗಿದೆ. ಉಚ್ಚಂಗಿದುರ್ಗ-ಅರಸೀಕೆರೆ ರಸ್ತೆ ಜಲಾವೃತಗೊಂಡಿದೆ. ಜಂಗಮ ತುಂಬಿಗೆರೆಯಲ್ಲಿ ಹಳ್ಳ ಭರ್ತಿಯಾಗಿ ಕೋಡಿ ಬಿದ್ದಿದೆ.

ಮತ್ತೊಂದೆಡೆ ಕೂಡ್ಲಿಗಿ ಭಾಗದಲ್ಲಿ ಉತ್ತಮ ಮಳೆಸುರಿದು, ಅಗ್ರಹಾರ ಗ್ರಾಮದ ಬಳಿ ಮೆಕ್ಕೆಜೋಳ ಹೊಲಕ್ಕೆ ನೀರು ನುಗ್ಗಿದೆ. ಹೊಸಪೇಟೆ, ಮರಿಯಮ್ಮನಹಳ್ಳಿ, ಕಮಲಾಪುರ ಭಾಗದಲ್ಲಿ ಸಹ ಗುರುವಾರ ಬೆಳಿಗ್ಗೆ 2 ಗಂಟೆ ಹೊತ್ತು ಉತ್ತಮ ಮಳೆ ಸುರಿಯಿತು.

ADVERTISEMENT
ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದ ಅಣಜಿಗೆರೆ-ಮಾದಿಹಳ್ಳಿ ರಸ್ತೆಯಲ್ಲಿನ ಹಳ್ಳದ ಸೇತುವೆ ಮೇಲೆ ಮಳೆ ನೀರು ಹರಿಯುತ್ತಿರುವುದು  –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.