ಚಡಚಣ: ಸ್ಥಳೀಯ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆಯು ಮಂಗಳವಾರದಿಂದ ಆರಂಭವಾಗಿದ್ದು ಬುಧವಾರ ಚೌಡೇಶ್ವರಿ ದೇವಸ್ಥಾನದಿಂದ ಪಲ್ಲಕ್ಕಿ ಹಾಗೂ ನಂದಿಧ್ವಜಗಳ ಮೆರವಣಿಗೆ ನಡೆಯಲಿದೆ. ನಂತರ ಸಮಾಜದ ಅಧ್ಯಕ್ಷ ಎಂ.ಆರ್. ಡೋಣಗಾಂವರ ಮನೆಯ ಬಳಿ ಕುಂಬು ಕಡಿಯುವ ಕಾರ್ಯಕ್ರಮವಿದೆ.
ಎರಡರಂದು ಚೌಡೇಶ್ವರಿ ದೇವಿಯ ಉಡಿ ತುಂಬುವ ಹಾಗೂ ದೇವಿಯ ಮುಖವನ್ನು ಕಟ್ಟಿಕೊಂಡು ಚಿಣ್ಣರು ಕುಣಿದಾಡುವ ಕಾರ್ಯಕ್ರಮ ಹಾಗೂ ದೇವಿಯ ಮೆರವಣಿಗೆ ನಡೆಯಲಿದೆ ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ನಿಡಗುಂದಿಗೆ ರೈತ ಸಂಪರ್ಕ ನೀಡಿ: ಅವಟಿ
ಆಲಮಟ್ಟಿ: ಬಸವನಬಾಗೇವಾಡಿ ತಾಲ್ಲೂಕಿನಲ್ಲಿಯೇ ದೊಡ್ಡ ಪಟ್ಟಣವಾಗಿರುವ ನಿಡಗುಂದಿಗೆ ರೈತ ಸಂಪರ್ಕ ಕೇಂದ್ರ ಸ್ಥಾಪನೆ ಮಾಡಿ, ರೈತರ ಬವಣೆಯನ್ನು ನಿವಾರಿಸಿ ಎಂದು ಜಿ.ಪಂ. ಸದಸ್ಯ ಶಿವಾನಂದ ಅವಟಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ನಿಡಗುಂದಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು, ಅಲ್ಲಿಯವರೆಗೆ ಹೋಬಳಿ ಸ್ಥಾನಮಾನ ನೀಡಬೇಕು ಎಂದು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.