
ಸಾಂದರ್ಭಿಕ ಚಿತ್ರ
ವಿಜಯಪುರ: ವಿಜಯಪುರ ನಗರದಿಂದ ಇಟ್ಟಂಗಿಹಾಳ- ಧನರ್ಗಿ ಮಾರ್ಗವಾಗಿ ತಿಕೋಟಾ ವರೆಗೆ ಜಲವರಿ 5 ರಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೂತನ ಬಸ್ ಸಂಚಾರ ಪ್ರಾರಂಭಿಸಲಿದೆ.
ವಿದ್ಯಾರ್ಥಿಗಳು, ರೈತರು ಕಾರ್ಮಿಕರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಹೊಸ ಬಸ್ ಸೇವೆ ಪ್ರಾರಂಭಿಸಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಸ್ ಸೇವೆ ಪ್ರಾರಂಭಿಸಲಾಗುತ್ತಿದೆ.
ಪ್ರತಿದಿನ ಒಂದು ಬಸ್ ವಿಜಯಪುರದಿಂದ ಇಟ್ಡಂಗಿಹಾಳ, ಲೋಹಗಾಂವ, ಧನರ್ಗಿ, ಸಿದ್ದಾಪುರ ಕೆ., ಮಲಕನದೇವರಹಟ್ಟಿ, ಸೋಮದೇವರಹಟ್ಟಿ ಮಾರ್ಗವಾಗಿ ತಿಕೋಟಾಕ್ಕೆ ಸಂಚರಿಸಲಿದೆ. ಈ ಮಾರ್ಗದಲ್ಲಿ ಬರುವ ತಾಂಡಾಗಳು ಹಾಗೂ ವಸ್ತಿಗಳಿಗೂ ನಿಲುಗಡೆ ನೀಡಲಾಗಿದೆ.
ಪ್ರತಿದಿನ ತಲಾ ನಾಲ್ಕು ಬಾರಿ ಈ ಮಾರ್ಗವಾಗಿ ಬಸ್ ವಿಜಯಪುರದಿಂದ ತಿಕೋಟಾ ಮತ್ತು ತಿಕೋಟಾದಿಂದ ವಿಜಯಪುರಕ್ಕೆ ಸಂಚರಿಸಲಿದೆ.
ಸೋಮವಾರ ಬೆಳಿಗ್ಗೆ 10 ಗಂಟೆಗೆ ಲೋಹಗಾಂವ ಗ್ರಾಮದಲ್ಲಿ ಈ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಸಚಿವರು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.