ADVERTISEMENT

ಆಲಮೇಲ: ಭಾರಿ‌ಮಳೆ ಭೀಮಾನದಿಯಲ್ಲಿ ರೈತ ಕೊಚ್ಚಿಹೋಗಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 10:58 IST
Last Updated 8 ಜುಲೈ 2021, 10:58 IST
   

ವಿಜಯಪುರ: ಜಿಲ್ಲೆಯ ಆಲಮೇಲ ತಾಲ್ಲೂಕಿನ ಕುರಬತಹಳ್ಳಿ ಗ್ರಾಮದ ರೈತ ಬಸವಂತರಾಯ ಅಂಬಾಗೋಳ (54) ಬುಧವಾರ ಸಂಜೆ ಹಳ್ಳದ ಸೆಳವಿಗೆ ಸಿಲುಕಿ, ಸಮೀಪದಲ್ಲೇ ಇರುವ ಭೀಮಾನದಿಗೆ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

ಆಲಮೇಲ ತಾಲ್ಲೂಕಿನಲ್ಲಿ ಬುಧವಾರ ಭಾರೀ ಮಳೆಯಾಗಿದ್ದು, ಈ ಸಂದರ್ಭದಲ್ಲಿ ಹೊಲಕ್ಕೆ ಹೋದ ರೈತ ಸಂಜೆ ಮನೆಗೆ ಬರುವ ವೇಳೆ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿರುವುದಾಗಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಪತ್ತೆ ಕಾರ್ಯ ನಡೆಸಿದ್ದಾರೆ ಆಲಮೇಲ ಠಾಣೆಯ ಪಿಎಸ್‌ಐ ಸುರೇಶ ಗಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.