ADVERTISEMENT

ಮಹಾರಾಷ್ಟ್ರ ಪಂಚಮಸಾಲಿ ಯುವ ಘಟಕದಿಂದ ಬಿಎಸ್‌ವೈಗೆ ಧಿಕ್ಕಾರ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 8:54 IST
Last Updated 4 ಆಗಸ್ಟ್ 2021, 8:54 IST
ಸಾಮಾಜಿಕ ಸಾಲತಾಣದಲ್ಲಿ ಶೇರ್ ಮಾಡಿದ್ದ ಪೋಸ್ಟರ್
ಸಾಮಾಜಿಕ ಸಾಲತಾಣದಲ್ಲಿ ಶೇರ್ ಮಾಡಿದ್ದ ಪೋಸ್ಟರ್   

ವಿಜಯಪುರ: ಪಂಚಮಸಾಲಿ ಸಮಾಜಕ್ಕೆ ಸೇರಿದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಿದ್ದು ಸವದಿ, ಅರವಿಂದ ಬೆಲ್ಲದ ಮತ್ತು ಆನಂದ ಮಾಮನಿ ಅವರಿಗೆ ಸಚಿವ ಸ್ಥಾನ ತಪ್ಪಿಸಿದ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಹಾರಾಷ್ಟ್ರ ಪಂಚಮಸಾಲಿ ಯುವ ಘಟಕ ಧಿಕ್ಕಾರ ಹಾಕಿದೆ.

ಈ ಸಂಬಂಧ ಸಾಮಾಜಿಕ ಸಾಲತಾಣದಲ್ಲಿ ಮಹಾರಾಷ್ಟ್ರ ಪಂಚಮಸಾಲಿ ಯುವ ಘಟಕದ ಮುಖಂಡ ಹೇಮಂತ ಪಾಟೀಲ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಚಮಸಾಲಿಗಳಿಗೆ 2 ಎ ಮೀಸಲಾತಿ ಕೊಡದೇ ಮೋಸ ಮಾಡಿದ, ಸಿಎಂ ಸ್ಥಾನ ತಪ್ಪಿಸಿದ ಬಿಎಸ್‌ವೈ ಅವರಿಗೆ ಪಂಚಮ ಸಾಲಿ ಸಮಾಜದಿಂದ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.