ADVERTISEMENT

ಬೀದಿ ವ್ಯಾಪಾರಿಗಳಿಗೆ ತಳ್ಳುಗಾಡಿ ಕೊಡುವ ಭರವಸೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 7:52 IST
Last Updated 2 ಜನವರಿ 2026, 7:52 IST
ಇಂಡಿ ನಗರದ ಲಚ್ಯಾಣ ರಸ್ತೆಯಲ್ಲಿ ನಡೆದ ಬೀದಿ ವ್ಯಾಪಾರಿಗಳು ರಚಿಸಿದ ಸಂಘದ ಉದ್ಘಾಟನೆ ಮಾಡಿದ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು
ಇಂಡಿ ನಗರದ ಲಚ್ಯಾಣ ರಸ್ತೆಯಲ್ಲಿ ನಡೆದ ಬೀದಿ ವ್ಯಾಪಾರಿಗಳು ರಚಿಸಿದ ಸಂಘದ ಉದ್ಘಾಟನೆ ಮಾಡಿದ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು   

ಇಂಡಿ: ‘ಬದುಕಿಗಾಗಿ, ಕುಟುಂಬ ನಿರ್ವಹಣೆಗಾಗಿ ಬಿಸಿಲು, ಮನೆ, ಚಳಿ ಎನ್ನದೇ ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುವ ಬಡ ಕುಟುಂಬಗಳು ತಮ್ಮ ಉಪಜೀವನಕ್ಕೆ ಬೇಕಾದ ತಳ್ಳುಗಾಡಿ ಮತ್ತು ಆಸರೆಗೆ ಕೊಡೆ ಬೇಡಿಕೆ ಇಟ್ಟಿದ್ದು, ಶೀಘ್ರದಲ್ಲಿಯೇ ನೀಡಲಾಗುವುದು’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.

ನಗರದ ಲಚ್ಯಾಣ ರಸ್ತೆಯಲ್ಲಿ ನಡೆದ ಬೀದಿ ವ್ಯಾಪಾರಿಗಳು ರಚಿಸಿದ ಸಂಘದ ಉದ್ಘಾಟನೆ ಮಾಡಿ ಮಾತನಾಡಿದರು.

ಧರ್ಮ ಗುರು ಶಾಕೀರ ಮೌಲಾನಾ ಮಾತನಾಡಿ, ‘ಬೀದಿ ವ್ಯಾಪಾರಿಗಳು ಬಡವರು. ಅವರು ದುಡಿದರೆ ಮಾತ್ರ ಜೀವನ ಸಾಗುತ್ತದೆ. ಅದಕ್ಕಾಗಿ ಸಂಘವು ಸಂಘಟನೆ ಮಾಡಿ ಅವರ ಸಮಸ್ಯೆಗೆ ಪರಿಹಾರ ನೀಡುವ ಮತ್ತು ಸಹಾಯ ಮಾಡುವ ಮನೋಭಾವ ಹೊಂದಬೇಕು’ ಎಂದರು.

ADVERTISEMENT

ಜಿಯಾ ಉಲ್ ಹಕ ಮೌಲಾನಾ, ಸತ್ತಾರ ಬಾಗವಾನ, ಯಾಕುಬ ನಾಟಿಕಾರ, ಇಲಿಯಾಸ ಬೋರಾಮಣಿ ಮಾತನಾಡಿದರು.
ಸಂಘದ ಇಂಡಿ ಅಧ್ಯಕ್ಷ ರಿಯಾಜ ಬಾಗವಾನ, ರಮಜಾನ ಶೇಖ್, ಫಯಾಜ ಬಾಗವಾನ, ನಿಸಾರ ಬಾಗವಾನ, ಪ್ರಶಾಂತ ಕಾಳೆ, ಜಟ್ಟೆಪ್ಪ ರವಳಿ, ಮುತಾಲಿಕ ಬಾಗವಾನ, ಉಪಾಧ್ಯಕ್ಷ ಅಮೀರ ಪಠಾಣ, ಜಾವೇದ ಮೋಮಿನ, ಆತೀಕ ಮೋಮಿನ, ಅಯೂಬ ಬಾಗವಾನ, ಶಬ್ಬೀತ ಖಾಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.