ADVERTISEMENT

ಚೌಡಯ್ಯ ಫಲಕ ತೆರವು ಗೊಳಿಸಲು ಡಿಎಸ್‌ಎಸ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 16:23 IST
Last Updated 6 ಆಗಸ್ಟ್ 2020, 16:23 IST
ಯಾದಗಿರಿ ತಾಲ್ಲೂಕಿನ ಅರಿಕೇರಾ (ಕೆ) ಗ್ರಾಮದಲ್ಲಿ ಚೌಡಯ್ಯ ನಾಮಫಲಕ ತೆರವುಗೊಳಿಸುವಂತೆ ದಸಂಸ ಪದಾಧಿಕಾರಿಗಳು ಗುರುವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು
ಯಾದಗಿರಿ ತಾಲ್ಲೂಕಿನ ಅರಿಕೇರಾ (ಕೆ) ಗ್ರಾಮದಲ್ಲಿ ಚೌಡಯ್ಯ ನಾಮಫಲಕ ತೆರವುಗೊಳಿಸುವಂತೆ ದಸಂಸ ಪದಾಧಿಕಾರಿಗಳು ಗುರುವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು   

ಯಾದಗಿರಿ:ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕ ಪಕ್ಕದಲ್ಲಿಒಂದು ವಾರದ ಹಿಂದೆ ರಾತ್ರೋ ರಾತ್ರಿನಿಜಶರಣ ಅಂಬಿಗರ ಚೌಡಯ್ಯ ನಾಮಫಲಕವನ್ನುತಾಲ್ಲೂಕಿನ ಅರಿಕೇರಾ (ಕೆ) ಗ್ರಾಮದ ವೃತ್ತದಲ್ಲಿ ಹಾಕಿದ್ದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ಯಾದಗಿರಿ-ಹೈದರಾಬಾದ್ ಮುಖ್ಯ ರಸ್ತೆ ತಡೆದು ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

‘ಸುಮಾರು ಹತ್ತು ವರ್ಷಗಳಿಂದ ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕ ಹಾಕಲಾಗಿದ್ದು, ಈಗ ಅದರ ಪಕ್ಕದಲ್ಲಿಯೇ ನಾಮಫಲಕ ಅಳವಡಿಸಿ ಶಾಂತಿ ಭಂಗವನ್ನು ಉಂಟು ಮಾಡಿದ್ದು, ಕೂಡಲೇ ತೆರವು ಮಾಡಬೇಕೆಂದು’ ದಸಂಸ ಕಾರ್ಯಕರ್ತರು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಯಾದಗಿರಿ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ‘ಒಂದು ವಾರದ ಒಳಗೆ ನಿಜಶರಣ ಅಂಬಿಗರ ಚೌಡಯ್ಯ ಭಾವಚಿತ್ರದ ನಾಮಫಲಕವನ್ನು ತೆರವುಗೊಳಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಒಂದು ವಾರದ ಒಳಗೆ ಕ್ರಮ ಕೈಗೊಳ್ಳದಿದ್ದರೆ ಮತ್ತೆ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದೆಂದು’ ಮುಖಂಡರು ಎಚ್ಚರಿಕೆ ನೀಡಿದರು.

ADVERTISEMENT

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಡಾ.ಮಲ್ಲಿಕಾರ್ಜನ ಆಶನಾಳ, ಕೆ. ಬಸವರಾಜ ಗೋನಾಲ ವಡಿಗೇರಿ, ಮಲ್ಲಿಕಾರ್ಜುನ್ ಶಾಖನವರ ವಡಿಗೇರಾ, ಭೀಮಣ್ಣ ಕ್ಯಾತನಾಳ ವಡಿಗೇರಾ, ಮಲ್ಲಿಕಾರ್ಜುನ್ ಕುರಕುಂದಿ, ಮಲ್ಲಪ್ಪ ಬಿ .ಉರುಸುಲ್ ಯಾದರಿರಿ, ದೇವಿಂದ್ರಪ್ಪ ಮೈಲಾಪುರ, ಗೌತಮ ಕ್ರಾಂತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.