ಕೆಂಭಾವಿ: ಪಟ್ಟಣ ಸಮೀಪ ಏವೂರ ಗ್ರಾಮದ ಮೂವರು ಗ್ರಾಮ ಪಂಚಾಯಿತಿ ಸದಸ್ಯರು, ಹಿರಿಯ ಮುಖಂಡರು ಹಾಗೂ ಯುವಕರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತೊರೆದು ಶಹಾಪುರ ಮತಕ್ಷೇತ್ರದ ಶಾಸಕ ಶರಣಬಸಪ್ಪ ದರ್ಶನಾಪುರ ಹಾಗೂ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಮರಿಗೌಡ ಹುಲಕಲ್, ಏವೂರ ಗ್ರಾಮದ ಹಿರಿಯ ಮುಖಂಡ ರಾಜು ಧಣಿ, ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಚಿಂಚೋಳಿ, ಶಿವಮಾಂತ ಚಂದಾಪುರ, ವಿಜಯರೆಡ್ಡಿ ಪಾಟೀಲ್, ರಾಜಶೇಖರ್ ಪಾಟೀಲ್, ಕೃಷ್ಣಯ್ಯ ಗುತ್ತೆದಾರ, ಚಂದಪ್ಪ ಗುತ್ತೆದಾರ, ಶಿವರಾಜ ಬೂದೂರು, ಗ್ರಾಮ ಪಂಚಾಯಿತಿ ಅಧ್ಯಕ್ಷ ತಪ್ಪಣ್ಣ ಚವ್ಹಾಣ, ಗೌಡಪ್ಪಗೌಡ ವಣಿಕ್ಯಾಳ್, ರಾಮನಗೌಡ ದೇಸಾಯಿ, ಮಾಂತಯ್ಯಸ್ವಾಮಿ ಹಿರೇಮಠ, ಶಿವಕುಮಾರ ಪಾಟೀಲ್, ದೇವೆಂದ್ರಪ್ಪ ಟಣಕೆದಾರ ಸೇರಿದಂತೆ ಕಾರ್ಯಕರ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.