ADVERTISEMENT

ಖಾನಾಪುರ: ಮರೆಮ್ಮದೇವಿ ಮೂರ್ತಿ ಭಗ್ನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 15:40 IST
Last Updated 3 ಫೆಬ್ರುವರಿ 2025, 15:40 IST
3 ಎಚ್ ಡಬ್ಲು1 ವಡಗೇರಾ ಸಮೀಪದ ಖಾನಾಪುರ – ತಡಿಬಿಡಿ ಮುಖ್ಯ ರಸ್ತೆಗೆ ಹೊಂದಿ ಕೊಂಡಂತೆ ಖಾನಾಪೂರ ಗ್ರಾಮದ ಹೊರ ವಲಯದಲ್ಲಿರುವ ಸೀಮೆ ಮರೆಮ್ಮ ದೇವಿಯ ದೇವಾಲಯದ ಒಳಗಡೆ ಬೆಂಕಿಯನ್ನು ಹಚ್ಚಿರುವದು.
3 ಎಚ್ ಡಬ್ಲು1 ವಡಗೇರಾ ಸಮೀಪದ ಖಾನಾಪುರ – ತಡಿಬಿಡಿ ಮುಖ್ಯ ರಸ್ತೆಗೆ ಹೊಂದಿ ಕೊಂಡಂತೆ ಖಾನಾಪೂರ ಗ್ರಾಮದ ಹೊರ ವಲಯದಲ್ಲಿರುವ ಸೀಮೆ ಮರೆಮ್ಮ ದೇವಿಯ ದೇವಾಲಯದ ಒಳಗಡೆ ಬೆಂಕಿಯನ್ನು ಹಚ್ಚಿರುವದು.   

ವಡಗೇರಾ: ಸಮೀಪದ ಖಾನಾಪುರ–ತಡಿಬಿಡಿ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವ ಸೀಮೆ ಮರೆಮ್ಮದೇವಿ ದೇವಸ್ಥಾನದಲ್ಲಿ ದೇವಿ ಮೂರ್ತಿಯನ್ನು ಭಾನುವಾರ ಕಿಡಿಗೇಡಿಗಳು ಭಗ್ನಗೊಳಿಸಿ, ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.

ಸೋಮವಾರ ಬೆಳಿಗ್ಗೆ ಭಕ್ತರು ದೇವಾಲಯಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ದೇವಾಲಯದ ಒಳಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳು ಮೂರ್ತಿಯನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗಿದ್ದಾರೆ. ದುಷ್ಕರ್ಮಿಗಳು ಉದ್ದೇಶ ಪೂರ್ವಕವಾಗಿಯೇ ಕೃತ್ಯ ಎಸಗಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ವಡಗೇರಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ADVERTISEMENT
3 ಎಚ್ ಡಬ್ಲು1 ಅ ದೇವಿಯ ಮೂರ್ತಿಯನ್ನು ಕಿಡಿಗೇಡಿಗಳು ಸುಟ್ಟು ಹೊರಗಡೆ ಎಸೆದು ಹೋಗಿರುವದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.