ADVERTISEMENT

ಜಾನುವಾರುಗಳ ದಾಹ ನೀಗಿಸುವ ಜಕರಡ್ಡಿ ಫಾರ್ಮ ಹೌಸ್

ಪವನ ಕುಲಕರ್ಣಿ
Published 28 ಮಾರ್ಚ್ 2021, 3:48 IST
Last Updated 28 ಮಾರ್ಚ್ 2021, 3:48 IST
ಕೆಂಭಾವಿ-ನಗನೂರ ಮಾರ್ಗ ಮಧ್ಯದ ಜಕರಡ್ಡಿ ಫಾರ್ಮ್‌ಹೌಸ್ ಮುಂದುಗಡೆ ಜಾನುವಾರುಗಳ ದಾಹ ನೀಗಿಸಲು ನಿರ್ಮಿಸಿರುವ ನೀರಿನ ತೊಟ್ಟಿ
ಕೆಂಭಾವಿ-ನಗನೂರ ಮಾರ್ಗ ಮಧ್ಯದ ಜಕರಡ್ಡಿ ಫಾರ್ಮ್‌ಹೌಸ್ ಮುಂದುಗಡೆ ಜಾನುವಾರುಗಳ ದಾಹ ನೀಗಿಸಲು ನಿರ್ಮಿಸಿರುವ ನೀರಿನ ತೊಟ್ಟಿ   

ಕೆಂಭಾವಿ: ಬೇಸಿಗೆ ಸಮಯದಲ್ಲಿ ಜನ ಸಾಮಾನ್ಯರು ಮಾತ್ರವಲ್ಲದೆ ಜಾನುವಾರುಗಳು, ಪಕ್ಷಿಗಳು ಕೂಡ ನೀರಿಗಾಗಿ ಪರಿತಪಿಸುತ್ತಿವೆ. ಜಾನುವಾರುಗಳಿಗೆ ಅನುಕೂಲವಾಗಲಿ ಎಂದು ಸ್ಥಳೀಯರಾದ ಕಿರಣ ಜಕರೆಡ್ಡಿ ಅವರು ತಮ್ಮ ಫಾರ್ಮ್‌ಹೌಸ್ ಮುಂದೆ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಪ್ರಾಣಿ, ಪಕ್ಷಿಗಳಿಗೆ ಜೀವಜಲ ಪೂರೈಸುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಪಟ್ಟಣ ಹೊರವಲಯದಲ್ಲಿರುವ ಕೆಂಭಾವಿಯಿಂದ ನಗನೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ತಮ್ಮ ಜಕರಡ್ಡಿ ಫಾರ್ಮಹೌಸ್ ದ್ರಾಕ್ಷಿ ತೋಟದ ಜಮೀನಿನ ಬಳಿ ತಮ್ಮ ಸ್ವಂತ ಖರ್ಚಿನಿಂದ ನೀರಿನ ತೊಟ್ಟಿ ನಿರ್ಮಿಸಿ ನಿತ್ಯ ನೂರಾರು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುತ್ತಿದ್ದಾರೆ.

ಅಲ್ಲದೆ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೂ ಅರವಟಿಕೆ ಇಡುವ ಮೂಲಕ ಜನರ ದಾಹವನ್ನು ನೀಗಿಸುತ್ತಿದ್ದಾರೆ.

ADVERTISEMENT

ಮನುಷ್ಯ, ಪ್ರಾಣಿ, ಪಕ್ಷಿಗಳು ನೆಮ್ಮದಿಯಿಂದ ಬದುಕಬೇಕಾದರೆ ಗಿಡ ಮರಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸಿ ಉಳಿಸಬೇಕಾಗಿದೆ ಎನ್ನುತ್ತಾರೆ ಡಾ.ಕಿರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.