ADVERTISEMENT

ಸ್ಪರ್ಧಾ ವಾಣಿ | ಬಹುಆಯ್ಕೆಯ ಪ್ರಶ್ನೋತ್ತರಗಳು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 0:30 IST
Last Updated 6 ಫೆಬ್ರುವರಿ 2025, 0:30 IST
   

ಸ್ಪರ್ಧಾ ವಾಣಿ | ಬಹುಆಯ್ಕೆಯ ಪ್ರಶ್ನೋತ್ತರಗಳು

ಸಮುದ್ರಯಾನದ ಸಂದರ್ಭದಲ್ಲಿ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು ಕೆಳಗಿನ ಯಾವ ಅಂತರರಾಷ್ಟ್ರೀಯ ಒಪ್ಪಂದ ಕಾರ್ಯನಿರ್ವಹಿಸುತ್ತಿದೆ?

ಎ. ಸಮುದ್ರಯಾನ ಮಾಲಿನ್ಯ ನಿಯಂತ್ರಣ ಒಪ್ಪಂದ.

ADVERTISEMENT

ಬಿ. ಸಮುದ್ರಯಾನ ಅಪಘಾತ ಮಾಲಿನ್ಯ ನಿಯಂತ್ರಣ ಒಪ್ಪಂದ.

ಸಿ. ಹಸಿರುಮನೆ ಅನಿಲ ತಡೆಗಟ್ಟುವಿಕೆ ಒಪ್ಪಂದ.

ಡಿ. ಹಡಗುಗಳ ಮಾಲಿನ್ಯ ನಿಯಂತ್ರಣ ಅಂತರರಾಷ್ಟ್ರೀಯ ಸಮಾವೇಶ ಒಪ್ಪಂದ.

ಉತ್ತರ : ಡಿ

ಇ-ಆಡಳಿತಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಯೋಜನೆಗಳನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ?

1. ಭೂಮಿ

2.ಖಜಾನೆ

3. ಮನುಜ

4. ನಿರಂತರ ಸೇವಾ

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮತ್ತು 2 

ಬಿ. 2 ಮತ್ತು 3 ‌

ಸಿ. 3 ಮತ್ತು 4

ಡಿ. 4 ಮಾತ್ರ

ಉತ್ತರ : ಎ

ಸ್ಮಾರ್ಟ್ ಆಡಳಿತದಲ್ಲಿ ಕೆಳಗಿನ ಯಾವ ಅಂಶಗಳನ್ನು ಅಳವಡಿಸಿಕೊಳ್ಳಲಾಗುತ್ತದೆ?

1. ಸರಳೀಕರಣ

2. ಆಡಳಿತ ವ್ಯವಸ್ಥೆಯಲ್ಲಿ ಮೌಲ್ಯಗಳ ಅಳವಡಿಕೆ.

3. ಉತ್ತರದಾಯಿತ್ವ

4. ಪ್ರತಿಕ್ರಿಯಾಶೀಲ ಆಡಳಿತ

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮತ್ತು 2 

ಬಿ. 1, 2, 3 ಮತ್ತು 4

ಸಿ. 2 ಮತ್ತು 4 

ಡಿ. 3 ಮತ್ತು 4

ಉತ್ತರ : ಬಿ

ಯುನೈಟೆಡ್ ಕಿಂಗ್ಡಮ್‌ನ ಕೆಳಗಿನ ಯಾವ ಪ್ರಧಾನಿಗಳು ನಾಗರಿಕ ಸನ್ನದನ್ನು ಪ್ರತಿಪಾದಿಸಿದರು?

1. ಜಾನ್ ಮೇಜರ್

2. ಮಾರ್ಗರೇಟ್ ಥ್ಯಾಚರ್

3. ಕ್ಯಾಮರೂನ್ ವೈಟ್

4. ಟೋನಿ ಬ್ಲೇರ್

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮತ್ತು 4 

ಬಿ. 1 ಮತ್ತು 2

ಸಿ. 2 ಮತ್ತು 3

ಡಿ. 3 ಮತ್ತು 4

ಉತ್ತರ : ಎ

ಭಾರತದಲ್ಲಿ ನಾಗರಿಕ ಸನ್ನದನ್ನು ಕೆಳಗಿನ ಯಾವ ಸಮಾವೇಶದ ನಂತರ ಜಾರಿಗೆ ತರಲಾಯಿತು?

ಎ. ರಾಜ್ಯಪಾಲರ ಸಮಾವೇಶ.

ಬಿ. ಹಣಕಾಸು ಸಚಿವರ ಸಮಾವೇಶ.

ಸಿ. ಮುಖ್ಯಮಂತ್ರಿಗಳ ಸಮಾವೇಶ.

ಡಿ. ರಕ್ಷಣಾ ಸಚಿವರ ಸಮಾವೇಶ.

ಉತ್ತರ : ಸಿ

ಅಲ್– ಅಕ್ಸಾ ಮಸೀದಿ ಮತ್ತು ಟೆಂಪಲ್ ಮೌಂಟ್ ಕೆಳಗಿನ ಯಾವ ಧರ್ಮದವರಿಗೆ ಪವಿತ್ರ ಸ್ಥಳವಾಗಿದೆ?

1. ಬೌದ್ಧ ಧರ್ಮದವರು.

2. ಜೈನ ಧರ್ಮದವರು.

3. ಇಸ್ಲಾಂ ಧರ್ಮದವರು.

4. ಯಹೂದಿ ಧರ್ಮದವರು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2 ಮತ್ತು 3 

ಬಿ. 3 ಮತ್ತು 4

ಸಿ. 2 ಮತ್ತು 3 

ಡಿ. 1 ಮತ್ತು 2

ಉತ್ತರ: ಬಿ

ಕೆಳಗಿನ ಯಾವ ರಾಷ್ಟ್ರ ಔಪಚಾರಿಕವಾಗಿ ಜೆರುಸಲೇಂ ಮತ್ತು ಗೋಲನ್ ಹೈಟ್ಸ್ ಪ್ರದೇಶ ಇಸ್ರೇಲ್‌ಗೆ ಸೇರಿದೆ ಎಂದು ಘೋಷಿಸಿದೆ?

ಎ. ಅಮೆರಿಕ

ಬಿ. ಫ್ರಾನ್ಸ್

ಸಿ. ಜಪಾನ್

ಡಿ. ಇಂಗ್ಲೆಂಡ್

ಉತ್ತರ: ಎ

ವಿಶ್ವ ಪತ್ರಿಕೋದ್ಯಮ ಸ್ವಾತಂತ್ರ್ಯ ಸೂಚ್ಯಂಕವನ್ನು ಕೆಳಗಿನ ಯಾವ ಸಂಸ್ಥೆ ಬಿಡುಗಡೆ ಮಾಡುತ್ತದೆ?

ಎ. ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್.

ಬಿ. ಭಾರತೀಯ ಪತ್ರಿಕೋದ್ಯಮ ಮಂಡಳಿ.

ಸಿ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ.

ಡಿ. ನ್ಯೂಸ್ ಬ್ರಾಡ್ ಕ್ಯಾಸ್ಟರ್ಸ್ ಅಸೋಸಿಯೇಷನ್.

ಉತ್ತರ: ಎ

ವಿಶ್ವ ಪತ್ರಿಕೋದ್ಯಮ ಸ್ವಾತಂತ್ರ್ಯ ಸೂಚ್ಯಂಕವನ್ನು ಬಿಡುಗಡೆ ಮಾಡಲು ಕೆಳಗಿನ ಯಾವ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ?

1. ರಾಜಕೀಯ ಪರಿಸ್ಥಿತಿ.

2. ಕಾನೂನಾತ್ಮಕ ನಿಬಂಧನೆಗಳು.

3. ಪತ್ರಕರ್ತರ ಭದ್ರತೆ.

4. ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸ್ಥಿತಿ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2 ಮತ್ತು 3 

ಬಿ. 1, 2, 3 ಮತ್ತು 4

ಸಿ. 2 ಮತ್ತು 3

ಡಿ. 3 ಮತ್ತು 4

ಉತ್ತರ: ಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.