ADVERTISEMENT

ಲೋಕಸಭಾ ಚುನಾವಣೆ: ರಾಜಸ್ಥಾನ, ಹರಿಯಾಣ, ಉ. ಪ್ರದೇಶದಲ್ಲಿ BJP ಉಸ್ತುವಾರಿಗಳ ನೇಮಕ

ಪಿಟಿಐ
Published 21 ಮಾರ್ಚ್ 2024, 9:49 IST
Last Updated 21 ಮಾರ್ಚ್ 2024, 9:49 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ನವದೆಹಲಿ: ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ ಉಸ್ತುವಾರಿಗಳು ಹಾಗೂ ಸಹ–ಉಸ್ತುವಾರಿಗಳನ್ನು ಬಿಜೆಪಿ ನೇಮಿಸಿದೆ.

ರಾಜಸ್ಥಾನದಲ್ಲಿ ಬಿಜೆಪಿ ನಾಯಕ ವಿನಯ್‌ ಸಹಸ್ರಬುದ್ದೆ ಅವರನ್ನು ಪಕ್ಷದ ಉಸ್ತುವಾರಿಯಾಗಿ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ವಿಜಯ ರಾಹತ್ಕರ್‌ ಮತ್ತು ಪರ್ವೇಶ್ ವರ್ಮಾ ಅವರನ್ನು ಸಹ–ಉಸ್ತುವಾರಿಗಳಾಗಿ ನೇಮಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ADVERTISEMENT

ಸತೀಶ್‌ ಪುನಿಯಾ ಅವರನ್ನು ಹರಿಯಾಣದ ಉಸ್ತುವಾರಿಯಾಗಿ ಮತ್ತು ಸುರೇಂದ್ರ ಸಿಂಗ್ ನಾಗರ್‌ ಅವರನ್ನು ಸಹ–ಉಸ್ತುವಾರಿಯಾಗಿ ಬಿಜೆಪಿ ಅಧ್ಯಕ್ಷ ಜೆ. ಪಿ ನಡ್ಡಾ ನೇಮಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಅವರನ್ನು ಲೋಕಸಭಾ ಚುನಾವಣೆಗೆ ಉಸ್ತುವಾರಿಯಾಗಿ ನೇಮಿಸಲಾಗಿದೆ. ಪಕ್ಷದ ನಾಯಕ ಸಿದ್ದಾರ್ಥ್‌ ನಾಥ್‌ ಸಿಂಗ್‌ ಅವರು ಸಹ–ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.