ADVERTISEMENT

LS polls | ಜನರ ನಂಬಿಕೆಗೆ ದ್ರೋಹ ಬಗೆದ ಪ್ರಧಾನಿ ಮೋದಿ: ಕಾಂಗ್ರೆಸ್ ತಿರುಗೇಟು

ಪಿಟಿಐ
Published 17 ಏಪ್ರಿಲ್ 2024, 15:51 IST
Last Updated 17 ಏಪ್ರಿಲ್ 2024, 15:51 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2014ರ ಭರವಸೆಗಳನ್ನು ನುಚ್ಚುನೂರು ಮಾಡಿದರು, 2019ರಿಂದ ಜನರ ನಂಬಿಕೆಗೆ ದ್ರೋಹ ಬಗೆದರು ಮತ್ತು 2024ರಲ್ಲಿ ಅವರ ನಿರ್ಗಮನವು ಗ್ಯಾರಂಟಿಯಾಗಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಮಣಿಪುರದ ಹಿಂಸಾಚಾರ ಮತ್ತು ಚೀನಾದ ಅತಿಕ್ರಮಣದಂಥ ಪ್ರಕರಣಗಳಿಂದ ಈಶಾನ್ಯ ಭಾರತದ ಜನ ಯಾವುದೇ ರಂಗದಲ್ಲಿ ಅಭಿವೃದ್ಧಿ ಹೊಂದದಂತೆ ಮೋದಿ ಸರ್ಕಾರ ತಡೆದಿದೆ ಎನ್ನುವುದು ಸಾಬೀತಾಗುತ್ತದೆ ಎಂದು ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ. 

ADVERTISEMENT

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಬಗ್ಗೆ ‘ಎಕ್ಸ್’ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಮಣಿಪುರದ ಹಿಂಸಾಚಾರ, ಈಶಾನ್ಯದ ಅನುದಾನಲ್ಲಿ ಅತ್ಯಂತ ಕಡಿಮೆ ಬಳಕೆ, ಕಾಡುಗಳು ಅಪಾಯವನ್ನು ಎದುರಿಸುತ್ತಿರುವುದು, ಅರುಣಾಚಲ ಪ್ರದೇಶದಲ್ಲಿ ಚೀನಾ ಅತಿಕ್ರಮಣ, ನಾಗಾ ಶಾಂತಿ ಮಾತುಕತೆಗೆ ಹಿನ್ನಡೆ’ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.