ADVERTISEMENT

ಚಿತ್ರೋತ್ಸವ: ಸಾವರ್ಕರ್‌, ಪಟೇಲ್‌ ಕಟೌಟ್‌ಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 22:30 IST
Last Updated 4 ಮಾರ್ಚ್ 2022, 22:30 IST
ಬಿ.ಎಸ್.ಲಿಂಗದೇವರು
ಬಿ.ಎಸ್.ಲಿಂಗದೇವರು   

ಬೆಂಗಳೂರು: 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾವರ್ಕರ್‌ ಮತ್ತು ವಲ್ಲಭಭಾಯ್‌ ಪಟೇಲ್‌ ಅವರ ಕಟೌಟ್‌ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಕೊನೆ ಯಲ್ಲಿ ಈ ಇಬ್ಬರ ಕಟೌಟ್‌ ಪ್ರದರ್ಶಿಸುವ ಔಚಿತ್ಯ ಏನು ಎಂದು ಹಿರಿಯ ಚಿತ್ರ ನಿರ್ದೇಶಕ ಬಿ.ಎಸ್‌.ಲಿಂಗದೇವರು ಪ್ರಶ್ನಿಸಿದ್ದಾರೆ.

ಚಿತ್ರೋತ್ಸವಕ್ಕೂ ಸಾವರ್ಕರ್‌, ಪಟೇಲ್‌ ಅವರಿಗೂ ಏನು ಸಂಬಂಧ? ಬೇಕಿದ್ದರೆ ದೇಶಭಕ್ತಿ ಸಂಬಂಧಿಸಿದ ಚಿತ್ರಗಳನ್ನು ಪ್ರದರ್ಶಿಸಬೇಕಿತ್ತು. ಅಂಥ ಸಾಕಷ್ಟು ಚಿತ್ರಗಳಿವೆ. ಇಂಥ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸುವುದಾದರೆ ಚಿತ್ರೋತ್ಸವದ ಉದ್ದೇಶವಾದರೂ ಏನು ಎಂದು ಅವರು ಕೇಳಿದ್ದಾರೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯೆಗೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.