ADVERTISEMENT

777 ಚಾರ್ಲಿ ಚಿತ್ರ ನೋಡಿ ‘ಗಳಗಳನೇ ಅತ್ತರು‘ ಸಿ.ಎಂ ಬಸವರಾಜ ಬೊಮ್ಮಾಯಿ...

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 10:10 IST
Last Updated 14 ಜೂನ್ 2022, 10:10 IST
ಬಸವರಾಜ ಬೊಮ್ಮಾಯಿ, ರಕ್ಷಿತ್‌ ಶೆಟ್ಟಿ
ಬಸವರಾಜ ಬೊಮ್ಮಾಯಿ, ರಕ್ಷಿತ್‌ ಶೆಟ್ಟಿ   

ಬೆಂಗಳೂರು: ಮೂಕ ಪ್ರಾಣಿಗಳ ಮುಗ್ಧ ಪ್ರೀತಿಯನ್ನು ನಟ ರಕ್ಷಿತ್‌ ಶೆಟ್ಟಿ ಅಭಿನಯದ‘777 ಚಾರ್ಲಿ’ ಸಿನಿಮಾದಲ್ಲಿಭಾವನಾತ್ಮಕವಾಗಿ ತೋರಿಸಲಾಗಿದೆ.

ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ವಿಮರ್ಶಕರು, ಪ್ರೇಕ್ಷಕರು ಮತ್ತು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ‌.

ಶ್ವಾನ ಪ್ರೇಮಿ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಹದ್ಯೋಗಿಗಳ ಜೊತೆಯಲ್ಲಿ ‘777 ಚಾರ್ಲಿ’ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ.ಒರಾಯನ್ ಮಾಲ್‌ನಲ್ಲಿ ಅವರು ಉಡುಪಿ ಶಾಸಕ ರಘುಪತಿ ಭಟ್, ಸಚಿವರಾದ ಆರ್‌.ಅಶೋಕ್, ಬಿ.ಸಿ.ನಾಗೇಶ್,ನಿರ್ದೇಶಕ ಕಿರಣ್ ರಾಜ್, ನಟ ರಕ್ಷಿತ್ ಶೆಟ್ಟಿ, ನಟಿ ಸಂಗೀತಾ ಶೃಂಗೇರಿ ಅವರೊಂದಿಗೆ ಸಿನಿಮಾ ವೀಕ್ಷಿಸಿದರು.

‘ಚಾರ್ಲಿ‘ ಸಿನಿಮಾ ನೋಡಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾದರು. ಸಿನಿಮಾ ಕೊನೆಯಲ್ಲಿ ‘ಚಾರ್ಲಿ‘ ಶ್ವಾನ ಸಾವನ್ನಪ್ಪುತ್ತದೆ. ಈ ಸನ್ನಿವೇಶವನ್ನು ನೆನೆದು ಅವರುದುಃಖಿತರಾದರು.ಆ ಕ್ಷಣದಲ್ಲಿ ದು:ಖವನ್ನು ತಡೆಯದೇ ಮಕ್ಕಳಂತೆ ಗಳಗಳನೇ ಅತ್ತುಬಿಟ್ಟರು ಎಂದು ತುಳಜಾ ಪವಾರ್‌ ಎಂಬುವವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.