ADVERTISEMENT

ಮಂಗಳಾದೇವಿಯಲ್ಲಿ ನೀವೇನು ದೊಡ್ಡ ಡಾನಾ?: ರಾಜ್‌ ಬಿ ಶೆಟ್ಟಿಗೆ ಶಿವರಾಜ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 8:08 IST
Last Updated 4 ಜನವರಿ 2022, 8:08 IST
ಗರುಡಗಮನ... ಚಿತ್ರದ ಪೋಸ್ಟರ್‌
ಗರುಡಗಮನ... ಚಿತ್ರದ ಪೋಸ್ಟರ್‌   

ಮಂಗಳಾದೇವಿಯಲ್ಲಿ ನೀವೇನು ದೊಡ್ಡ ಡಾನಾ? ಎಲ್ಲಿ ಬರಬೇಕು ಹೇಳಿ...

ಹೀಗೆಂದು ಪ್ರಶ್ನಿಸಿದ್ದು ಶಿವರಾಜ್‌ಕುಮಾರ್‌. ಅಂದಹಾಗೆ ಈ ಪ್ರಶ್ನೆ ಕೇಳಿದ್ದು ಗರುಡಗಮನ ವೃಷಭವಾಹನದ ‘ಶಿವ’ನಿಗೆ. ಚಿತ್ರದ ನಾಯಕ ರಾಜ್‌ ಬಿ. ಶೆಟ್ಟಿ ಅವರಿಗೆ. ಭಜರಂಗಿ – 2 ಚಿತ್ರವು ‘ಝೀ 5’ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಅದರ ಬೆನ್ನಲ್ಲೇ ಗರುಡಗಮನ ವೃಷಭ ವಾಹನವೂ ಅದೇ ವೇದಿಕೆಯಲ್ಲಿ ಜ. 13ಕ್ಕೆ ಬಿಡುಗಡೆಯಾಗಲಿದೆ. ಅದಕ್ಕೆ ಪೂರ್ವಭಾವಿಯಾಗಿ ಶಿವರಾಜ್‌ಕುಮಾರ್‌ ರಾಜ್‌ ಬಿ. ಶೆಟ್ಟಿ ಅವರಿಗೆ ಕರೆ ಮಾಡಿ ಶುಭಹಾರೈಸಿದ್ದಾರೆ.

ಮೊದಲು ಡಾನ್‌ನ್ನು ವಿಚಾರಿಸುವ ಶೈಲಿಯಲ್ಲಿ ‘ನಾನು ಭಜರಂಗಿ ಮಾತಾಡ್ತಿರೋದು’ ಎಂದು ಹೇಳಿ ಕಾಲೆಳೆದಿದ್ದಾರೆ. ಉಭಯರ ಮಾತುಕತೆ ಸನ್ನಿವೇಶದ ವಿಡಿಯೋವನ್ನು ಝೀ–5 ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದೆ.

ADVERTISEMENT

ಭಜರಂಗಿ 2, ಕನ್ನಡಿಗ ಸಾಲಿನಲ್ಲಿ ಈಗ ಗರುಡ ಗಮನವೂ ಝೀ – 5 ಒಟಿಟಿ ತೆಕ್ಕೆಗೆ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.