ಫಾರ್ ರಿಜಿಸ್ಟ್ರೇಷನ್ ಚಿತ್ರದ ಮೂರನೇ ಹಾಡಿನ ರೆಕಾರ್ಡಿಂಗ್ ಇತ್ತೀಚೆಗೆ ಮುಗಿದಿದೆ.ನಿಶ್ಚಲ್ ಫಿಲಮ್ಸ್ ಬ್ಯಾನರ್ ಅಡಿ ನವೀನ್ ರಾವ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಮೊದಲ ಹಂತದ ಶೂಟಿಂಗ್ ಮುಕ್ತಾಯವಾಗಿದೆ. ಹಾಡುಗಳ ರೆಕಾರ್ಡಿಂಗ್ ಭರದಿಂದ ಸಾಗಿದೆ. ಶೀಘ್ರವೇ ಮುಂದಿನ ಹಂತದ ಶೂಟಿಂಗ್ಗೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
ಹರೀಶ್ ಆರ್.ಕೆ. ಸಂಗೀತ ನಿರ್ದೇಶನದ ‘ಯಾಕಾಗಿ ಕರಗಿತು ಸಂತೋಷ’ ಈ ಹಾಡಿಗೆಸಿದ್ಧಾರ್ಥ ಬೆಳ್ಮಣ್ಣು ಧ್ವನಿಯಾಗಿದ್ದಾರೆ.ನಾಗಾರ್ಜುನ ಶರ್ಮಾ ಅವರ ಸಾಹಿತ್ಯವಿದೆ.
ನವೀನ್ ದ್ವಾರಕನಾಥ್ ಚಿತ್ರದ ನಿರ್ದೇಶಕರು, ಪೃಥ್ವಿ ಅಂಬರ್ ಮತ್ತು ಮಿಲನಾ ನಾಗರಾಜ್ ಅವರು ಪ್ರಧಾನ ಭೂಮಿಕೆಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.