ಬೆಂಗಳೂರು:ನಟಿ ರಮ್ಯಾ ಮತ್ತು ನಟ ಜಗ್ಗೇಶ್ ನಡುವೆ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಾಕ್ಸಮರ ನಡೆಯುವುದು ಮಾಮೂಲಿನ ಸಂಗತಿ. ರಮ್ಯಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟರ್ನಲ್ಲಿ ಟೀಕೆಗಳ ಸುರಿಮಳೆ ಸುರಿಸುವುದು ಸರ್ವೇ ಸಾಮಾನ್ಯ. ಆ ವೇಳೆ ರಮ್ಯಾ ಅವರಿಗೆ ಟಾಂಗ್ ನೀಡುವ ಮೊದಲ ವ್ಯಕ್ತಿಯೆಂದರೆ ಜಗ್ಗೇಶ್ ಎಂದು ಬಿಡಿಸಿ ಹೇಳಬೇಕಿಲ್ಲ. ಮತದಾನ ಸಂಬಂಧ ಈ ಇಬ್ಬರ ನಡುವಿನ ಟ್ವೀಟ್ ಸಮರ ಮತ್ತೆ ಆರಂಭಗೊಂಡಿದೆ.
‘ಈ ಸಲ ಮತದಾನಕ್ಕೆ ಅರ್ಹರಾಗಿರುವ ಎಲ್ಲರೂ ಹೆಸರು ನೋಂದಾಯಿಸಿಕೊಳ್ಳಿ. ಕಾಲ ಸರಿಯುತ್ತಿದೆ. ಬೇಗ ಹೆಸರು ನೋಂದಣಿ ಮಾಡಿಸಿಕೊಳ್ಳಿ. ಮತದಾನ ಮಾಡಿ. ಭವಿಷ್ಯ ನಿಮ್ಮ ಕೈಯಲ್ಲಿದೆ’ ಎಂದು ರಮ್ಯಾ ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್ ವಿರುದ್ಧ ಕೆಲವರು ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದರು. ‘ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲೂ ನೀವು ವೋಟು ಹಾಕಲಿಲ್ಲ. ಮೊದಲು ನೀವು ಮತದಾರರರಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡು ಮತದಾನ ಮಾಡಿ. ಬಳಿಕ ಮತದಾನದ ಮಹತ್ವ ಸಾರಿ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಗರು ರಮ್ಯಾಗೆ ತರಾಟೆ ತೆಗೆದುಕೊಂಡಿದ್ದರು. ಈಗ ರಮ್ಯಾ ಅವರನ್ನು ಜಗ್ಗೇಶ್ ಕೂಡ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಬಾಳುವವರಿಗೆ ಒಂದೆ ಮಾತು!
ಬಾಳೆಗೆ ಒಂದೆ ಗೊನೆ!
ನಮ್ಮ ಹಳ್ಳಿಯ ಗಾದೆ!
ಆಕೆ ಮಾನಸಿಕ ಅಸ್ವಸ್ಥೆ!
ಯಾರಿಗೆ ವಂಶವಾಹಿನಿ ಅರಿವಿರುತ್ತದೋ ಅವರು ಜವಾಬ್ದಾರಿ ಮನುಷ್ಯರು!
ಮನುಷ್ಯರಿಗೆ ಬುದ್ಧಿ ಹೇಳಬಹುದು
ಮೃಗಕ್ಕೆ ಅಲ್ಲಾ!
ಎಂದು ಜಗ್ಗೇಶ್ ಟ್ವಿಟರ್ನಲ್ಲಿ ರಮ್ಯಾ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.
ಇದರ ಜತೆ ಇನ್ನೂ ಕೆಲ ಟ್ವೀಟ್ಗಳನ್ನು ಜಗ್ಗೇಶ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.