‘ಮಹಾನಟಿ’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿರುವ ಕೀರ್ತಿ ಸುರೇಶ್ಗೆ ಅಭಿನಂದನೆಗಳ ಸುರಿಮಳೆಯೇ ಬಂದಿದೆ. ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿರುವ ಬಗ್ಗೆ ಖುಷಿ ಹಂಚಿಕೊಂಡಿರುವ ನಟಿ, ‘ಸಿನಿಮಾಗಳನ್ನು ಆಯ್ಕೆ ಮಾಡುವುದರಲ್ಲಿ ನಾನು ಇನ್ನೂ ಪಕ್ವವಾಗಬೇಕಿದೆ. ಜವಾಬ್ದಾರಿಯಿಂದ ಸಹಿ ಮಾಡಬೇಕು’ ಎಂದು ಹೇಳಿಕೊಂಡಿದ್ದಾರೆ.
‘ನನ್ನ ಸಿನಿಮಾಗಳ ಆಯ್ಕೆ ಸರಿಯಾಗಿಯೇ ಇದೆ ಎಂದು ನಾನು ಬಲ್ಲೆ. ಆದರೆ ಸರಿಯಾದ ಸಿನಿಮಾ ಆಯ್ಕೆ ನನ್ನ ಸಿನಿಬದುಕಿನ ದಿಕ್ಕನ್ನು ಬದಲಾಯಿಸಬಹುದು’ ಎಂದಿದ್ದಾರೆ.
ಈ ನಟಿ ಕಾರ್ತಿಕ್ ಸುಬ್ಬರಾಜ್ ಅವರ ಮಹಿಳಾ ಕೇಂದ್ರಿತ ಕಥಾವಸ್ತುವುಳ್ಳ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರವನ್ನು ಹೊಸಬರಾದ ಈಶ್ವರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ಆರಂಭವಾಗಲಿದೆ.
ಕೀರ್ತಿ ಸುರೇಶ್ ಸದ್ಯದಲ್ಲೇ ಬಾಲಿವುಡ್ಗೂ ಪ್ರವೇಶ ಮಾಡಲಿದ್ದಾರೆ. ಬೋನಿ ಕಪೂರ್ ನಿರ್ದೇಶನದ ಚಿತ್ರದಲ್ಲಿ ಅಜಯ್ ಜೊತೆ ನಟಿಸಲಿದ್ದಾರೆ. ಇದು ಫುಟ್ಬಾಲ್ ಕೋಚ್ ಹಾಗೂ ಅಟಗಾರ ಸೈಯದ್ ಅಬ್ದುಲ್ ರಹೀಂ ಅವರ ಜೀವನಾಧಾರಿತ ಕತೆ. ಇದರಲ್ಲಿ ರಹೀಂ ಪತ್ನಿ ಪಾತ್ರದಲ್ಲಿ ಕೀರ್ತಿ ಕಾಣಿಸಿಕೊಳ್ಳಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.